Monday, April 30, 2012

|| ಕಾಲ ||

ಜೀವವೊಂದು ಕುಣಿಯುತಿದೆ ಎಳುತ
ಪ್ರಾಣವೊಂದು ಮರುಗುತಿದೆ ಬೀಳುತ
ಏಳುಬೀಳಿನಾಟ ನಡೆಸುವನು ತನ್ನಿಚ್ಛೆಯಂತೆ
ನರ್ತಿಸುತ ನಟನೆ ನಡೆವುದು ಕಾಲಪುರುಷನ ಮನಿಸಿನಂತೆ ||

ಶ್ರೋತ್ರುವಾಗಿ ಕೇಳುತಿಹೆವು ವಾಣಿಯೊಂದನು
ಸಾವಿರ ನಿನ್ನೆಗಳುರುಳಿರುವುದನ್ನು ಅರಿತಿಹೆವು
ಕೋಟಿ ಕೋಟಿ ನಾಳೆಗಳು ಬರುವುದನ್ನು ಎದುರುನೋಡುತಿರುವೆವು
ನೀರಿಕ್ಷೆಯಲಿ ಸುಮ್ಮನೆ  ವ್ಯಯಿಸಲು ಸಾಧ್ಯವೇ ಇಂದಿನ ಸಮಯವನು ||

ನಿರ್ದಿಷ್ಠಕಾರ್ಯಕೆ ಕಾಲ ಮೀಸಲಿಟ್ಟು
ಉಳಿದ ಘಳಿಗೆಯನ್ನೆಲ್ಲ ಅದರ ಗುಂಗಲೇ ಕಾಲಹರಣ ಮಾಡಿದರೆ
ಕಳೆದ ಸಮಯವೆಂದು ತಿರುಗಿ ಸಿಗದು ಜೀವನದಲಿ
ಇತರರನ್ನು ಗೌರವಿಸಿದಂತೆ ಕಾಲವನ್ನು ಗೌರವಿಸಿದರೆ
ಮಾಡಬಹುದು ಉನ್ನತ ಸಾಧನೆಯನ್ನು ಸಮಯಪ್ರಜ್ನೆಯಿಂದ ||

ಕಳೆದ ಸಮಯವು ಮತ್ತೆಂದೂ ಕೈಗೆ ಸಿಗದು ಪುನಃ
ಪರಿಸ್ಥಿತಿಯು ಬದಲಾಗದು ಕಾಲಚಕ್ರ ತಿರುಗದ ವಿನಃ
ಒಳ್ಳೆಯ ಸಮಯದಿ ನಡೆವುದು ಅದೃಷ್ಟದಾಟವು
ತಿರುಗಿದ ಕ್ಷಣದಲೇ ನಲಿವುದು ದುರಾದೃಷ್ಟವು
ಬದುಕಿನೇಳುಬೀಳಿಗೆ ಹೊಣೆಯಾಗುವುದು ಕಾಲ ||

Sunday, April 29, 2012

|| ವರಿಸು ||

          ಕವನ ಹೇಳುಲೆ ಇಲ್ಲಾ ಕವಿಗೊಷ್ಠಿ ನಡೆಸಲೆ
          ಮೆಚ್ಚುಗೆಯನು ತಿಳಿಸಲು ನಿನಗೆ ಬರೆದು ಕಳಿಸಲೆ
          ಏಕಾಂತವ ಸೃಷ್ಠಿಸು ಎನೇ ಹೇಳ ಬೇಕೆಂದರೂ
          ನಾಲಿಗೆಯಲೆ ಬಚ್ಚಿಟ್ಟಿಕೊ ಗುಟ್ಟೊಂದನು
          ಸದುಪಯೋಗಪಡಿಸಿಕೊಳ್ಳು ಬೃಂದಾವನವನು||

ಕನಸೋ ನನಸೋ
ತಿಳಿಯದೆ ಮಿಡಿಯುವ ಮನಸೋ
ನಿನ ಕಾಣದೆ ನನಗೇನೊ ಮುನಿಸು
ಸೇರಲು ಬಯಸಿಹೆನು ಬಾ ನನ್ನ ವರಿಸು ||

ಸ್ಪಷ್ಟವಾಗಿ ಹೇಳು
ಇಷ್ಟವಾದ ವಾಣಿಯನು
ಕಷ್ಟವಾದರೆನಂತೆ ನಿಷ್ಠನಾಗಿ ಚಲಿಸುವೆನು
ದುಷ್ಠನಾಗದೆ ಕಾಮನೆಗೆ ಎಂದೂ||

ಕಣ್ಣೀರ ಒರೆಸುತ ಸಂತೈಸೊ ತಾಯಿ ನೀನು
ಸುಸ್ತಾಗಿ ಬಂದು ಮಡಿಲಲ್ಲಿ ಮಲಗೊ ಮಗು ನಾನು
ಸೊದರಿಯು ಸರಿಮಾಡುವಂತೆ ಸೌಂದರ್ಯವನು
ಮೀರಿಸು ತಪ್ಪೊಪ್ಪನು ಮನವರಿಕೆ ಮಾಡೋ ಗೆಳತಿಯನು
ಸುಖ ದುಃಖವನು ಹಂಚಿಕೊಳ್ಳೊ ಮಡದಿಯಾಗುವೆಯೇನು ||

Saturday, April 28, 2012

|| ನವಜೀವನ ||

ಭಾಗ್ಯದ ಜ್ಯೋತಿಯನು
ಹಚ್ಚಿ ಬೆಳಗುವಳು ಮನೆಯ
ವಿವಾಹ ಬಂಧನದಿಂದ
ನವಜೋಡಿಗಳ ಉದಯ
ಅರಿಯದ ಜೀವಗಳು
ಜೊತೆಯಲಿ ಬಾಳುವ ಸಂಕಲ್ಪ
ಎಳೇಳು ಜನ್ಮದ ಸಂಬಂಧ
ಅನುಬಂಧವಾಗಿಸುವ ಈ ಬಂಧ ||

ಹರಿಯುವ ನದಿಯು ಭೋರ್ಗರೆಯುವ
ಕಡಲಲಿ ಅಂತ್ಯಕಂಡಂತೆ
ಪ್ರೀತಿಸುವ ಹೃದಯಗಳು
ಜೀವನವೆಲ್ಲ ಜೋತೆಯಿರಲು ಮದುವೆಯಾದಂತೆ
ಅನುರಾಗದ ಅನುಬಂಧವು ಜೀವನದ
ದೋಣಿಯೊಂದರಲ್ಲಿಯೇ ಇಬ್ಬರನ್ನು ತೇಲಿಸಲಿ ||

ಮಾಗಿಯ ಕಾಲದಲ್ಲಿ
ಸಿಹಿ ಮಾವಿನ ಹಣ್ಣೆ ರುಚಿಯು
ಎರಡು ಜೀವಗಳು ಎಲ್ಲರೆದುರಲಿ ಜೊತೆಯಾಗಲು
ಮದುವೆಯ ಸಮಾರಂಭವೆ ಶುಚಿಯು
ಎಲ್ಲರೆದುರಲಿ ಜೀವಗಳೊಂದಾಗಲು
ನೋಡಲು ಚೆನ್ನ ಆಶೀರ್ವದಿಸುತ ||

ಏಳು ಹೆಜ್ಜೆಯನು ನಡೆವರು
ಜೀವನವೆಲ್ಲ ಜೊತೆಯಾಗಿರಲು
ಹಿರಿಯರು ಹಾಕುವರು ಬಂಧಿಗಳಾಗಲು ಬ್ರಹ್ಮಗಂಟು
ಸಂಗಾತಿಗಳಾದ ಮೇಲೆ ಮುರಿಯದಿರಲಿ ಬಾಳನಂಟು
ಅರಿತು ಬದುಕಲಿ ಬಾಳಸುಳಿಯಲಿ
ಮುಳುಗದಿರಲಿ ಬಾಳನೌಕೆಯು ನೀರಲಿ ||

|| ಧ್ಯಾನ ||

ಜಗದಿಂದಲೇ ಆರುತಿದೆ ಬೆಳಕು
ಆವರಿಸುತ ಬಂದಿದೆ ಕತ್ತಲು
ಏಂದೂ ಆರದಿರಲಿ ಈ ಹಣತೆ ||

ಸುಡೋ ಬಿಸಿಲಿನು ತರುವವನು ನೀನೆ
ಆ ಜಡಿಮಳೆಯನು ಸುರಿಸೋನು ನೀನೆ
ಎಂದು ಅಡಗದಿರಲಿ ಈ ಪ್ರಕೃತಿಯ ತಂಪು ||

ಕಾಣುವ ರಂಗಿನ ಕಾಮನಬಿಲ್ಲು
ರವಿಗೆದುರಾಗುವ ಅಂದದ ಬೆಳ್ಮುಗಿಲು
ನಿನ್ನ ಅಂದ ವೃಧ್ಧಿಸುವ ಆಭರಣಗಳು ||

ಮುಗಿಲ ಕ್ರೋಧವನು ತಣ್ಣಗಾಗಿಸು ಅತಿವೃಷ್ಠಿಯಿಂದ
ನೀರು,ತಂಪನು ನೀಡಿ ಬದುಕಿಸು ಅನಾವೃಷ್ಠಿಯಿಂದ
ಲೋಕವನು ರಕ್ಷಿಸು ಬರುವ ಪ್ರಕೃತಿ ವಿಕೋಪದಿಂದ ||

ಸದೃಢನನ್ನಾಗಿ ಮಾಡು ನನ್ನನು
ಎಣ್ಣೆಯನು ಒದಗಿಸಲು ಜ್ಯೋತಿಯಾರದಂತೆ
ನಿನ್ನ ಕೃಪಾಪೋಷಣೆಯಲ್ಲಿರುವ ಧ್ಯಾನಿಗಳು ನಾವೆಲ್ಲ ||

|| ಮುಂಜಾವು ||

ಕಿರಣನು ಜಗದ ಅಧಿಕಾರಿಯಾಗಲು
ಬಿಳಿಮುಗಿಲ ಹಿಂದೆ ಅಂಬೆಗಾಲಿಡುತಿಹನು
ನೇಸರನ ನೋಡುತ್ತ ತಾವರೆಯು ಆರಳುತ್ತ
ಬಾನಾಡಿಗಳ ಹಿಮ್ಮೇಳಕೆ ನರ್ತಿಸುತಿಹುದು ||

ನೈದಿಲೆಯು ಬಿಕ್ಕಳಿಸುತ ಬೆಳಕಿನಲಿ
ಬಾಷ್ಪವನು ಸುರಿಸುತಿಹುದು
ಆ ಕಂಬನಿಯೇ ಇಬ್ಬನಿಯಾಗಿ
ಮರಗಳ ಮೇಲಿಂದ ಬೀಳುತಿಹುದು ||

ಅರಿಶಿನ,ಕುಂಕುಮವ ತನ್ನ ಮೊಗದ ಸಿರಿಯಾಗಿ
ಹಚ್ಚಿಕೊಂಡು ಬಾನಿಗೆ ಬಂದನು ಭಾಸ್ಕರನು
ತಿನಿಸನ್ನು ತಿನ್ನುತ್ತ ಹಸಿವನ್ನು ನೀಗಿಸುತ
ಹೂವಿನ ಮಕರಂದ ಹೀರುತಲಿ ದುಂಬಿಗಳು ಹಾರುತಿವೆ ||

ಬೆಳ್ಳು ಮೂಡಿರುವುದನ್ನು ನೋಡಿ ಕೋಳಿ ಕೂಗಿರುವುದನ್ನು ಕೇಳಿ
ಸುಪ್ರಭಾತದಂತೆ ತನ್ನೊಡೆಯನನ್ನು ಹಸುವು ಕರೆಯುತಿದೆ
ರಿಂಗಣದ ಸದ್ದನು ಕೇಳಿ ಜಗವೆಲ್ಲ ಎಳುತ್ತ
ದಿನದ ಕಾರ್ಯವ ಮಾಡಲು ಅಣಿಯಾಗುತಿದೆ ||

ಖುಷಿನೀಡುವ ಮುಂಜಾವಿನ ತಂಪಿನಲಿ
ಪ್ರಕೃತಿಯು ವಿಸ್ಮಯವ ತೋರುತ್ತ
ಉಷೆಯ ಉದಯದ ಗುಟ್ಟನ್ನು ಹೇಳುತ್ತ
ನಿಸರ್ಗದ ಲೀಲೆಗಳು ಸೃಷ್ಠಿಯಲಿ ಐಕ್ಯವಾದವು ||

ವರ(ಧು)ದಕ್ಷಿಣೆ

ಮೊದಲಿನಿಂದಲೂ ನಡೆದುಬಂದ ಸಾಮಾಜಿಕ ಪಿಡುಗೇ ಈ ವರದಕ್ಷಿಣೆ. ಈ ವರದಕ್ಷಿಣೆಯಿಂದ ಸ್ತ್ರೀ ಶೋಷಣೆಯು ನಡೆಯಿತು ಮತ್ತು ಕೆಲವು ಕಡೆಗಳಲ್ಲಿ ನಡೆಯುತ್ತನೂ ಇದೆ . ನಾಗರಿಕ ಸಮಾಜವು ಖಂಡಿತ ತಲೆತಗ್ಗಿಸುಂತ ಒಂದು ಪಿಡುಗೇ ಈ ವರದಕ್ಷಿಣೆ. ಇದಕ್ಕಾಗಿ ನಮ್ಮ ಹಿರಿಯರು ಹೋರಾಟ ನಡೆಸಿ ಎಚ್ಚರಿಕೆಯನ್ನು ಈ ಸಮಾಜಕ್ಕೆ ನೀಡಿದ್ದು ಸ್ವಾಗತಾರ್ಹ. ಇದರಿಂದ ಕೆಲವರು ಜಾಗೃತರಾಗಿ ಬದಲಾದರು. ಬೇರೆ ಬೇರೆ ಜಾತಿಗಳಲ್ಲಿ ಇದು ಈಗಲೂ ಚಾಲ್ತಿಯಲ್ಲಿದೆ. ಹಾಗಾಗಿ ನಮ್ಮ ಮಾನ್ಯ ಸರ್ಕಾರವು ಒಂದು ಕಾನೂನನ್ನೂ ಜಾರಿಗೊಳಿಸಿದೆ.

ಕಾಲಚಕ್ರ ತಿರುಗಿದಂತೆ ಪರಿಸ್ಥಿತಿಯು ಬದಲಾಗುತ್ತದೆ ಎಂಬಂತೆ ವಿಷೇಶವಾಗಿ ನಮ್ಮ ಹವ್ಯಕಬಾಂಧವರಲ್ಲಿ ವರದಕ್ಷಿಣೆ ಮಾಯವಾಗಿ ವಧುದಕ್ಷಿಣೆ ಪ್ರಾರಂಭವಾಗಿದೆ. ಹುಡುಗ ಮನೆಯಲ್ಲಿಯೇ ಅಂದರೆ ಹಳ್ಳಿಯಲ್ಲಿಯೇ ಕೃಷಿಕನಾಗಿ ಕೆಲಸಮಾಡುತ್ತಿದ್ದರೆ ಅದನ್ನ ದೊಡ್ಡತಪ್ಪು ಎನ್ನುವ ಹುಡುಗಿಯರು ಮದುವೆಯಾಗಲು ನಿರಾಕರಿಸುವರು. ಆವರಿಗೆಲ್ಲ ಪೇಟೆಯಲ್ಲಿ ದೋಳನ್ನು ತಿನ್ನುತ್ತ, ಯಾಂತ್ರಿಕ ಜೀವನವನ್ನು ನಡೆಸುತ್ತ, ಪುರುಸೊತ್ತು ಇಲ್ಲದ ವ್ಯಕ್ತಿಯೇ ತುಂಬ ಚೆನ್ನಾಗಿ ಕಾಣುತ್ತಾನೆ. ಹಳ್ಳಿಯಲ್ಲಿ ವೈದಿಕನಾಗಿ, ಕೃಷಿಕನಾಗಿ, ಸ್ವಂತಕೆಲಸಮಾಡುವ ವ್ಯಕ್ತಿಯನ್ನು ಮದುವೆಯಾಗಬೇಕೆಂದರೆ ಈ ಹುಡುಗಿಯರು ಮತ್ತು ಅವರ ಪಾಲಕರು ಹೆಚ್ಚಿನ ರೀತಿಯ ಬೇಡಿಕೆಗಳನ್ನ ಮುಂದಿಡುತ್ತಾರೆ. ಹುಡುಗನು ತನ್ನ ಪಾಲಕರನ್ನು ಬಿಟ್ಟು ಬೇರೆ ಮನೆಯನ್ನು ಮಾಡಬೇಕು, ಅವಳಿಗೆ ಏನು ಕೆಲಸವಾಗಂತೆ ನೋಡಿಕೊಳ್ಳ ಬೇಕು. ಅದಲ್ಲದೆ ಹುಡುಗನಿಗೆ ತಂದೆ ತಾಯಿ ಇರಬಾರದು, ಮನೆಯಲ್ಲಿ ದನದಕೊಟ್ಟಿಗೆ ಇರಬಾರದು, ಹೊರಗಿನ ಕೆಲಸ ಮಾಡಲು ಆಳುಗಳು ಇರಬೇಕು ಎನ್ನುವಂತಹ ಕಟ್ಟುಪಾಡುಗಲನ್ನ ಹಾಕುತ್ತಿರುವುದು ಕಂಡುಬರುತ್ತದೆ.ಇದು ಪ್ರಜ್ನಾವಂತ ಸಮಾಜದಲ್ಲಿ ಆಗುವಂತಹ ಬದಲಾವಣೆಯೇ? ಎನ್ನುವುದು ಅರ್ಥವಾಗದಂತಾಗಿದೆ.

೪ ಅಕ್ಷರಗಳನ್ನ ಓದಿದ ಮಾತ್ರಕೆ ಯಾರೇನು ಶ್ರೇಷ್ಠರಲ್ಲ. ಇಂತಹ ಹುಚ್ಚುವರ್ತನೆಯಿಂದ ಎಲ್ಲರೋಗಗಳ ಆಗರವಾಗುತ್ತಿರುವುದು ದೇಹಕ್ಕೆ ವ್ಯಾಯಾಮವಿಲ್ಲದೆ. ಅತಿಯಾದ ಸುಖ ಜೀವಕ್ಕೆ ಮಾರಕವಾಗುತ್ತದೆನ್ನುವ ಸತ್ಯವ ಮರೆತು ಮೆರೆಯುತ್ತಿದ್ದಾರೆ. ಹೇಗೆ ಅತಿಯಾದರೆ ಅಮೃತವೂ ವಿಷವೆಂಬ ಗಾದೆಯಂತೆ. ಮನೆಯಲ್ಲಿಯೆ ಇರುವ ವ್ಯಕ್ತಿಯು ಮದುವೆಯಾಗಬೇಕೆಂದರೆ ಹುಡುಗಿಯ ಅಪ್ಪನ ಸಾಲಗಳನ್ನ ತೀರಿಸಿ, ಇನ್ನೂ ಹಚ್ಚಿನ ಹಣವನ್ನು ನೀಡಿ, ಮದುವೆಯ ಖರ್ಚುಗಳನ್ನೆಲ್ಲ ಭರಿಸಿ ಮದುವೆಯಾಗುವ ಪರಿಸ್ಥಿತಿ ನಮ್ಮ ಹವ್ಯಕ ಸಮಾಜದಲ್ಲಿ ವಧುದಕ್ಷಿಣೆಯಾಗಿ ಬದಲಾಗಿದೆ. ಇಂತಹ ಪರಿಸ್ಥಿತಿಯನ್ನ ನೋಡಿದ್ದರೆ ನಮ್ಮ ಹಿರಿಯರು ವರದಕ್ಷಿಣೆಯ ವಿರುದ್ಧ ದನಿಯೆತ್ತುವುದನ್ನ ಬಿಟ್ಟು ಸುಮ್ಮನಾಗುತ್ತಿದ್ದರೋ ಎನೋ?

  ಕಾನೂನು ರೀತಿಯಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದು ತಪ್ಪು ಎಂದಾದರೆ ವಧುದಕ್ಷಿಣೆ ಕೊಡುವುದು, ಸ್ವೀಕರಿಸುವುದು, ಬೇಡಿಕೆ ಮುಂದಿಡುವುದು ಸರಿಯೇ? ಇದಕ್ಕೆ ನಮ್ಮ ಪ್ರಜ್ನವಂತ ಸಮಾಜ ಮತ್ತು ಘನ ಸರ್ಕಾರ ಉತ್ತರಿಸಬೇಕು. ಹಳ್ಳಿಯಲ್ಲಿ ಸಿಗುವ ಸ್ವಛ್ಛವಾದ ವಾತಾವರಣ ಮತ್ತು ನೈಸರ್ಗಿಕ ಉಸಿರನ್ನ ಬಿಟ್ಟು ಪೇಟೆಯಲ್ಲಿರುವ ದೂಳು ಮತ್ತು ಮಾಲಿನ್ಯಗಳೇ ಬೇಕೆ?

  ನಮ್ಮ ಹಿಂದಿನವರು ವರದಕ್ಷಿಣೆಯಿಂದ ಶೋಷಣೆ ಮಾಡಿದ್ದರೆ ಇಗಿನವರೇಕೆ ಶಿಕ್ಷೆಯನ್ನ ಅನುಭವಿಸ ಬೇಕು..? ಇದನ್ನು ನಮ್ಮ ಪ್ರಜ್ನಾವಂತ ಸಮಾಜ ಖಂಡಿಸಿ ವರ(ಧು)ದಕ್ಷಿಣೆಗಳನ್ನು ನಿರ್ಮೂಲನೆಮಾಡಿ ಸ್ವಛ್ಛಂದ ವಾತಾವರಣವನ್ನು ಪರಿಸರದಲ್ಲಿ ಹುಟ್ಟುಹಾಕಲು ನಾಂದಿಹಾಡಲಿ. ವ್ಯಕ್ತಿ ಗೌರವ ನೀಡುತ್ತ ಎಲ್ಲರನ್ನು ಗೌರವಿಸೊಣ.

Wednesday, April 25, 2012

|| ಬೇಸಿಗೆ ||

ವಸಂತ ಮಾಸವು ಸಡಗರದಿ ಬಂತು
ಕೋಗಿಲೆಗಾನದ ಜೊತೆ ಬಿಸಿಲದಗೆಯನು ತಂತು
ಪೂರ್ಣವಿರಾಮವಿಲ್ಲದ ಕೆಲಸದಲಿ
ಉರಿಯಿದು ಹೆಚ್ಚಾಯ್ತು ದೇಹದಲಿ ||

ಸೆಕೆಯನು ತಾಳಲಾಗದೆ ಅರಸಿದರು
ನೀರಿನ ಕೊಳವನು ಮುಳುಗಲು
ವಸ್ತ್ರವೆಲ್ಲ ಒದ್ದೆಯಾಯ್ತು ಹನಿಯಿಂದ
ಮೈಮೇಲೆ ಸುರಿಯುವ ಬೆವರಿನ ಮಳೆಯಿಂದ ||

ಎಲ್ಲರು ಅರಸುತ ಹೊರಟರು
ತಂಪಿನ ಕೋಣೆಯ ಕಡೆಗೆ
ದೇಹ ತಣಿಯದೆ ಬಳಲಿದೆ
ತಿರುಗುವ ಗಾಳಿಪಂಕದ ಕೆಳಗೆ ||

ಬಾಯಾರಿದ ಭೂಮಿಗೆ ವರ್ಷದ ಸ್ಪರ್ಷವಿಲ್ಲದೆ
ಅಡಗಿದೆ ಮುಗಿಲು ಕಡಲಿನ ತಳದಲಿ
ದಗೆಯಲಿ ಬೇಯುತ ತಂಪನು ಬಯಸುತ
ಏಂದೋ ಮಳೆಯನು ಸ್ವಾಗತಿಸುವುದು ಬೀಳ್ಕೊಡುತ ಬೇಸಿಗೆಯುನು ||

Tuesday, April 24, 2012

|| ಪ್ರಿಯತಮ ||

ಮಳೆಬರುವ ಸೂಚನೆಯನು ನೀಡುತಲಿ
ದೀಪದ ಹುಳುಗಳು ಗುಂಪಿನಲಿ ಹಾರುತಿವೆ
ನಿನ್ನ ಹೃದಯದ ಮಿಡಿತಗಳನು ಕೇಳುತಲಿ
ಕಮಲದಂತ ಕಣ್ಣುಗಳು ನಿನ್ನೆಡೆಗೆ ಬರುವ
ಮಾರ್ಗದಲಿ ದಾರಿತಪ್ಪುತಿವೆ ||

ನಿನ್ನ ಮುಖದ ಕಾಂತಿಯಿಂದ
ಮರೆಯಲಿ ಮರೆಯಾದ ಪೂರ್ಣಶಶಿಯು
ಸಂಪಿಗೆ ರೂಪದ ನಿನ್ನ ನಾಸಿಕ ನೋಡಿ
ಬಾಡಿ ಉದುರುದವು ಸಂಪಿಗೆ ಹೂಗಳು
ಮಳೆಯಲಿ ನೆನೆದರು ತಂಪಾಗದು
ಬಿಸಿಲಲಿ ನಿಂತರೂ ಒಣಗೆನು
ಸಂಗಾತಿ ನಿನ್ನ ಸಂಗಡ ನಾನಿರುವಾಗ ||

ಬೆಲ್ಲದ ಪಾಕವ ಸವಿದಂತೆ
ನೀ ನನ್ನ ಜೊತೆಯರಲು
ಭೋರ್ಗರೆವ ಕಡಲು
ಹರಿವ ನದಿಗಳಿಗೆ ನೆಲೆಯಾದಂತೆ
ನನ್ನ ಬದುಕು ಹರಿದಿದೆ ನಿನ್ನ ತಳದ ಕಡೆಗೆ
ನಿನ್ನಯ ಜಪದಲ್ಲಿ ಮುಳುಗಿದರೂ
ದರ್ಶನ ನೀಡದೆ ಸತಾಯಿಸುವೆಯಾ
ಕೋಪದಲಿ ದೇವನು ಉಗುಳಿದರೂ
ನಿನ್ನ ಧ್ಯಾನದಲ್ಲೆ ಮೈಮರೆವೆನು ಪ್ರಿಯತಮ ||

|| ಮನಸಿನ ಮಿಡಿತ ||



ತಿರುಗಿ ನೋಡು ಗೆಳತಿ
ನಿನ್ನ ಒಲವನು ಬಯಸುತ ಹೃದಯ ಮಿಡಿದಿದೆ
ಕುಂಟುಬಿಲ್ಲೆ ಅಡುತ
ತುಂಟ ಕೀಟ್ಲೆ ಮಾಡುವ ಬಯಕೆ ಅತಿಯಾಗಿದೆ
ಬಾಲ್ಯದ ದಿನಗಳು ಕಾಡುತ
ನಿನ್ನ ಸಂಗಡ ಓಡಾಡಿ ಕಳೆದ ದಿನಗಳು ನೆನಪಾಗಿದೆ ||

ನಾನು ನೀನು ಕದ್ದು ಕಿತ್ತ
ಜಂಬೆಹಣ್ಣ ನೋಡಿದೆ
ಮುಂಗಡವಾಗಿ ಹಂಚಿಕೊಂಡು
ಸವೆದ ರುಚಿಯು ನಾಲಿಗೆಯಲ್ಲೇ ಉಳಿದಿದೆ
ಸುರಿವ ಮಳೆಯಿಂದ
ಹರಿವ ಹೊಳೆಯಲಿ ಗಾಲಿಯಾಕಾರ ದೊಡ್ಡದಾಗಿದೆ ||

ನಾವು ಕುಣಿದು ಕುಪ್ಪಳಿಸಿದ
ಮೈದಾನದಲಿ ಆಟವಿಂದು ಜೋರಾಗಿದೆ
ನಿನ್ನ ನಾಗಜಡೆಯನ್ನು
ಎಳೆದು ರೇಗಿಸುವ ಆಸೆಯಾಗಿದೆ
ಕೋಷದಲಿ ಬಚ್ಚಿಟ್ಟ
ನವಿಲುಗರಿಗೆ ಮುದ್ದು ಮರಿಯಾಗಿದೆ
ಹುಸಿ ಮನಿಸು ಬಂದಾಗ
ನಿನ್ನ ಕನಸು ಕಾಣುವ ವಯಸಲಿ
ಮನಸಿನ ಮಿಡಿತಗಳು ಮಿತಿ ಮೀರಿವೆ ||

|| ಕಪ್ಪು ಹಲಗೆ ||


ಬರೆದರೆ ಬಿಳುಪಾಗಿ ಕಾಣುವುದು
ಬೇಡವೆಂದರೆ ಅಳಿಸಲೂಬಹುದು
ಹಳೆದನು ಅಳಿಸುತ
ಬೇರೆಯದನು ಬರೆಯುತ
ಹೊಸದನು ತಿಳಿಯಬಹುದು ಅತ್ತಿತ್ತ ಅರಸದೆ ||

ಸ್ಪಷ್ಟವಾಗಿ ನೋಡಿದ್ದೆಲ್ಲ ಇಷ್ಟವಾಗಿ
ವರಿಸಲು ಮನದಲಿ ಇಛ್ಛೆಯಾಗಿ
ನನ್ನದು ಎಂಬ ಭಾವನೆ ಗಾಢವಾಗಿ
ಖುಷಿಯಲಿ ಎದೆಯುಬ್ಬಿಸಿ ನಡೆವರು ವಿರಹಿಯಾಗಿ  ||

ದಿನವನು ಕಾಣುತ ಖುಷಿಯಲಿ
ಹೃದಯ ಹಾಡಿತು ಎದೆಯಲಿ
ಒಂದರ ಹಿಂದೆ ಒಂದನ್ನ ನೋಡಲು ಒಲವಾಗಿ
ಹೃದಯವಾಗುವುದು ಕಪ್ಪುಹಲಗೆಯ ಪ್ರತಿಬಿಂಬ ||

Sunday, April 22, 2012

Life is too beautiful
Emotional is part of it
Build it safely
Protect it securely.  

ಶುಭರಾತ್ರಿ

ಕಡಲಲಿ ಮೀಸುತ ಅಸ್ಥಂಗತನಾದನು ಭಾನು
ಕಾರ್ಯ ಪ್ರವರ್ತರಾಗಲು
ಮುಂಚುಣಿಯಲ್ಲಿವೆ ನಿಶಾಚರಗಳು
ಲೋಕಕೆ ಬೆಳದಿಂಗಳ ತಂಪನು
ಚೆಲ್ಲುತ ಮೇಲೇರಿದನು ಶಶಿಯು
ಜ್ಯೋತಿಯು ಜಗವ ಬೆಳಗಲು
ಜನ್ಮತಾಳಿತು ಉರಿಯುತ  ||
…………….ಶುಭರಾತ್ರಿ……………

Thursday, April 19, 2012

|| ಸುಖ ನಿದ್ದೆ ||

ಎಲ್ಲೆಂದರಲ್ಲಿ ಸಿಕ್ಕಿದವು ರತ್ನಗಳು
ಆದೆನು ಹತ್ತೂರ ಒಡೆಯನು
ಕತ್ತಿಯ ಹಿಡಿದು ಸುತ್ತಲು ನಿಂತರು
ಕಣ್ತೆರೆದು ನೋಡಿದರೆ ಸ್ವಪ್ನದಲಿ ಇದ್ದೆನು ನಿದ್ದೆಯಲಿ ||

|| ಸ್ವಪ್ನ ||



ಬಹಳ ದಿನಗಳ ನಂತರ
ಗೆಳೆಯರೀರ್ವರು ಭೇಟಿಯಾದರು
ಕೊನ ಕೇಳಿದನು ಕುಶಲೋಪರಿಯ
ಪೂರ್ಣವಿರಮವಿಲ್ಲದೆ ಹೇಳಿದನು ಸೀನ
ನನ್ನ ಸ್ವಪ್ನ ಸುಂದರ
ನನ್ನ ಸ್ವಪ್ನ ಹಾಗೆ ಹೀಗೆ ಎಂದು
ಏನು ಅರ್ಥವಾಗದ ಕೊನನು
ತಲೆಕೆಟ್ಟಿ ನಿಂತನು
ಅವನನ್ನು ನೋಡಿ ಸೀನ ಹೇಳಿದನು
ನಾನು ಹೇಳುತ್ತಿರುವುದು
ರಾತ್ರಿ ಕಾಣುವ ಕನಸಿನ ಬಗ್ಗೆ ಅಲ್ಲ
ನನ್ನ ಮಡದಿ ಸ್ವಪ್ನಳ ಬಗ್ಗೆ ಎಂದು ||

|| ಆಸೆ ||

ಹೆಜ್ಜೆ ಮೇಲೆ ಹೆಜ್ಜೆಯಿಡುತ
ಅನವರತ ನಡೆಯುತಿಹಳು ಜೊತೆಯಲಿ
ಮಾಡುವ ಕಾರ್ಯವನು ಬೆಂಬಲಿಸುತ
ಸ್ಪೂರ್ತಿಯಾಗಿ ನಿಂತಿಹಳು
ನಿನ್ನ ಸ್ನೇಹ ನಿರ್ಮಲ
ನಿನಗೆ ದೊರೆತ ವರವದು
ನುಡಿದಳು, ಸ್ನೇಹ ನಿನಗಾಗಿ,
ನಿನ್ನ ಜೊತೆಯಾಗಿ ನಿನ್ನ ಏಳಿಗೆಗಾಗಿ
ಮೊಹಗೊಂಡು ನನ್ನ ಸಂಗಾತಿಯಾಗುವೆಯಾ
ಎಂದು ಕೇಳಿದರೆ
ಗೆಳೆತನದಿ ಜೊತೆಯಿರುವೆ
ಎಂದು ಪೇಳಿದವಳೆ ಸ್ನೇಹ  ||

|| ಶುಭದಿನ ||

ನಿಶೆಯ ನೂಕುತ್ತ ತನ್ನ ಇರುವಿಕೆಯನ್ನ ತೋರುತಿದೆ
ಬೆಳಕು ಇಳೆಯಲಿ ಪ್ರಜ್ವಲಿಸಲು ಹೊರಟಿದೆ
ಬಾನಾಡಿಗಳು ಸಂಗೀತಸುಧೆಯನು ಹರಿಸುತ
ಶುಭದಿನ ಹೇಳುತಲಿ ರವಿಯನು ಸ್ವಾಗತಿಸುತ್ತಿವೆ ||

Wednesday, April 18, 2012

|| ಸ್ನೇಹ ||


ಮೊಗ್ಗೊಂದು ಅರಳಿದಂತೆ
ಮರವೊಂದು ಚಿಗುರಿದಂತೆ
ಅಂಕುರಿಸುವುದು ಗೆಳೆತನ ಜೀವ ಜೀವಗಳ ನಡುವಿನಲಿ ||

ವಯಸ್ಸಿನ ಅಂತರವಿರದೆ
ಸಮಾನಮನಸ್ಕರು ಬೆರೆತಾಗ
ಒಬ್ಬರನ್ನೊಬ್ಬರು ಸಮರ್ಥಿಸುವರು ಪರಸ್ಪರ ||

ಮೇಲುಕೀಳೆಂಬ ಬೇಧಭಾವವಿಲ್ಲದೆ ಜನಿಸುವ
ಕಲಿಕೆಯುಲಿ, ಉದ್ಯೋಗದಲಿ, ಮಾತಿನಲಿ, ಪರಿಚಯದಲಿ
ಗುಣನೋಡಿ ಗೆಳೆತನವಾಗಿರಲು ಅಳಿವಿಲ್ಲ ||

ಜೀವಿಗಳು ಗೆಳೆತನದಿ ಸೇರಲು
ಸಾಮಾಜಿಕ ಕ್ರಾಂತಿಯನು ಸಂಘಟಿಸಲು
ಬದಲಾವಣೆ ಮಾಡುತ್ತ ಒಗ್ಗಟ್ಟಿನಲಿ ಮುನ್ನುಗ್ಗುವರು ||

ಓಳ್ಳೆಯ ಗುಣವಿರಲು
ಪ್ರಾಣಕೆ ಪ್ರಾಣಕೊಡುವಷ್ಟು ಬೆರೆತಿರಲು
ನೋವುನಲಿವನ್ನೆಲ್ಲ ಹಂಚಿಕೊಳುವರು ಪ್ರಾಣಸ್ನೇಹಿತರು ||

ಒಳಿತನ್ನು ಬಯಸಿ
ಬೆಂಬಲಿಸುತ ಏಳಿಗೆಗೆ ಸಹಕರಿಸುವ
ಸಂಬಂಧಕ್ಕಿಂತ ಮಿಗಿಲಾಗಿ ಒಂದು ಹೆಜ್ಜೆ ಮುಂದಿರುವುದೇ ಸ್ನೇಹವು ||

ಮುಂದೆಂದು ಬಾಡದಿರಲಿ ಹೂವಂತೆ
ಎಂದೆಂದು ಉದುರದೆ ನಲಿಯಲಿ ಚಿಗುರೆಲೆಯಂತೆ
ಅಜರಾಮರವಾಗಿ ಪ್ರಜ್ವಲಿಸುತ ಬೆಳಗುವ ರವಿಚಂದ್ರರಂತೆಯೇ ಸ್ನೇಹ ||

Tuesday, April 17, 2012

|| ಕಣ್ಮಣಿ ||

ಹೃದಯದ ನುಡಿಯೊಂದನು ನೀ ಹೇಳು
ನಿನ್ನ ಬದುಕಿನ ದೋಣಿಗೆ ನಾವಿಕ ನಾನೆಂದು
ಮನಸಾರೆ ಮನಸಿಂದ ನೀ ಕೇಳು
ನನ್ನೆಲ್ಲಾ ಕೀರ್ತಿಗೂ ಮೊದಲ ಹೆಸರು ನಿನದೆಂದು
ಸಂಕಟಬರಲಿ ಸಂತೋಷದಲಿ ಇರುವಾಗ
ಎದುರಿಸುವೆ ಎದೆಗಾರಿಕೆಯಿಂದ ಜೊತೆಯಲಿ ನೀನಿರುವಾಗ ||

ದುಡಿದು ಬರುವೆನು ದಣಿವು ತರುವೆನು
ಸಂತೈಸು ನನ್ನನು ಹಿಡಿಸುವ ಹಿತನುಡಿಯನಾಡುತ್ತ
ಬೇಸರದಿ ನಾ ಮುದುಡಿ ಕುಂತಾಗ
ಆರೈಸು ನನ್ನನು ತಾಯಿ ಮಗುವನ್ನು ಓಲೈಸುವಂತೆ
ಅತಿಯಾಗಿ ಬೆವರಿದೆ ತಂಗಾಳಿಯಲ್ಲೂ
ನೀನಿಲ್ಲದ ಜೀವನವನ್ನು ಊಹಿಸಲು ಆಗದೆ ||

ಬೇಸರವು ಬೆಳದಿಂಗಳಲ್ಲೂ
ನೀನು ಕಣ್ಣಲ್ಲಿ ಕಂಬನಿಯನು ಹರಿಸಿದಾಗ
ಭರವಸೆಯಲಿ ನುಡಿಯುವೆನು
ರತ್ನಗಂಬಳಿಯ ಮೇಲೆ ನಡೆಸುವೆನು ಮಹಾರಾಣಿಯಂತೆ
ನಿರಾಳನಾದೆ ನಾನು ನಿನ್ನಿಂದ
ನನ್ನವರೆಲ್ಲ ನಿನ್ನವರೆನ್ನುವುದನ್ನು ಕೇಳಿದಾಗ ||

ಅಂದದ ಅರಸಿಯ ನೋಡಿದ ಕ್ಷಣದಿಂದ
ನಿದ್ರೆಯನು ಮರೆತಿಹೆನು ಕಲ್ಪನೆಯಲಿ ಕನಸನ್ನು ಕಾಣುತ್ತ
ಸಂಗಾತಿ ನಿನ್ನನು ವರಿಸಲು ತವಕಿಸಿ
ಬರುವೆನು ಅತೀಶೀಘ್ರದಲ್ಲಿ ನನ್ನೆಡೆಗೆ ಹೊತ್ತೊಯ್ಯಲು
ನನ್ನ ಹುಡುಗಿ ನನ್ನವಳಾಗಿರಲು
ತೋರುವುದು ಜಗದಲ್ಲಿ ಬೇರೆಲ್ಲವೂ ಶೂನ್ಯವಾಗಿ ||

Sunday, April 15, 2012

|| ಸುಕುಮಾರ ||

ನಿನ್ನ ಕಿವಿ ಕಚ್ಚಲೇನು?
ನನ್ನ ಬದುಕಿನ ದೊರೆಯು ನೀನು
ಅಂಜಿಕೆಯು ಎದೆಯಲಿ ಕೂಗಿ ಹೇಳಲು
ನಾಚಿಕೆಯು ನನಗೆ ಬೇರೆಯವರು ಕೇಳಲು ||

ನಿನ್ನ ಪಡೆದಿರುವುದು ನನ್ನ ಅದೃಷ್ಠವು
ನೀ ಸಿಗದೇ ಇದ್ದಿದ್ದರೆ ಆಗುತ್ತಿತ್ತು ಭಾರಿ ನಷ್ಠವು
ಹಿಡಿಸಿದೆ ನಿನ್ನಯ ಮೃದು ಸ್ವಭಾವವು
ಅಂದಗಾರನ ಬೇಗನೆ ಸೇರಲು ಮನದಲಿ ಆತುರವು ||

ಒರೆಸು ನೀನು ಹರಿಸಿದರೆ ಕಣ್ಣೀರಧಾರೆಯನು
ಹೂವಿನ ಮೇಲೆ ನಡೆಸುವೆ ಎಂದು ನಂಬಿಹೆ ನಾನು
ಸೋತಿಹೆ ನಿನಗೆ ನನ್ನವನೆಂದು
ತಿಳಿದಿಹೆ ನಾನು ನಿನ್ನವರನ್ನೆಲ್ಲ ನನ್ನವರೆಂದು ||

ತೆಳ್ಳಗೆ ಬೆಳ್ಳಗೆ ಇರುವ ನಿನ್ನ
ಚದುರಿದ ಕೇಷವು ನೋಡಲು ಚೆನ್ನ
ಬೇಗನೆ ನನ್ನನು ವರಿಸಲು ಬಾರ
ಏನೇ ಆದರೂ ನಿನ್ನವಳಾಗೇ ಇರುವೆ ಓ ಸುಂದರ ಸುಕುಮಾರ ||

Thursday, April 12, 2012

|| ಮುಳ್ಳಿನ ಹೂವು ||

ನೋವು ನಲಿವಿನ ಸಂಬಂಧ
ಹೂವು ಮುಳ್ಳುಗಳ ಅನುಬಂಧ
ನೋವಾಗುವುದು ಹೂವನ್ನು ತೆಗೆಯಲು
ನಲಿವಿನಲಿ ಸಂಭ್ರಮಿಸುವರು ಮುಡಿದು  ||

ಪ್ರೇಮ ನಿವೇದಿಸಿ ಕೊಡುವರು ಮುಳ್ಳಿನ ಹೂವನ್ನ
ಬದುಕಲಿ ಎದುರಿಸುವ ನೋವು ನಲಿವಿನ ಮುನ್ನ
ಎಲ್ಲ ಶುಭ ಸಮಾರಂಭದಲ್ಲೂ ಬಳಸುವರು ನಿನ್ನ
ಆಮಂತ್ರಿತರಿಗೆ ನೀಡುತ್ತ ಸ್ವಾಗತಿಸುವುದು ಚೆನ್ನ  ||

ನಿನ್ನಯ ರಕ್ಷ್ಣೆಗಾಗಿ ಇರುವುದು ಹೊದಿಕೆ
ಕೀಳಲು ಹೆದರುವರು ಮುಳ್ಳಿನ ಭಯಕೆ
ಪ್ರೀತಿಯ ಸಂಕೇತ ಕೆಂಪು ಗುಲಾಬಿ
ಪ್ರೇಮಿಯಾಗದಿದ್ದರೆ ಹಿಡಿವರು ಶರಾಬಿ  ||

ಹೂವಿನ ಜೊತೆಗಿದೆ ಮುಳ್ಳಿನ ಸಾಲು
ಜೀವನದಲ್ಲುಂಟು ಕಷ್ಠ ಸುಖಗಳ ಪಾಲು
ನಿನ್ನಂದವ ನೋಡಿ ಎಳುವುದು ಮೈಯಲಿ ಕಾವು
ಜೀವನ ಸತ್ಯವ ತಿಳಿಸುವುದು ಮುಳ್ಳಿನ ಹೂವು  ||

|| ಬಯಸಿದೆ ನಿನ್ನನ್ನು ||

ಅನಿಸಿದೆ ಮನದಲ್ಲಿ ಅವನನ್ನು ನೋಡಿದ ಕ್ಷಣಕೆ
ಸಪ್ತಪದಿ ತುಳಿವ ಸುಕುಮಾರನು ನನ್ನಯ ಜೊತೆಗೆ
ಅವನ ಮೇಲಾಗಿದೆ ಏನೋ ಮೊಹ
ಪ್ರಿಯತಮನ ಸೇರುವ ತನಕವೂ ತೀರದ ದಾಹ ||

ಸೋತಿಹೆ ನಾನು ನಿನ್ನಯ ಗುಣಕೆ
"ವಸುದೈವ ಕುಟುಂಬಕಂ" ಎನ್ನುವ ಘಳಿಗೆ
ಎಲ್ಲರ ನುಡಿಯಲ್ಲೂ ನಿನ್ನದೆ ಹೊಗಳಿಕೆ
ಬರಗಾಲದಂದ ತತ್ತರಿಸಿತು ದೂಷಿಸುವ ತೆಗಳಿಕೆ  ||

ಅಂಜದೆ ಸ್ವೀಕರಿಸುವೆ ಜವರಾಯನ ಆಹ್ವಾನವನ್ನ
ನಿನ್ನ ಬಾಹು ಬಂಧನದಲ್ಲಿ ನಾ ಖೈದಿಯಗಿರುವಾಗ
ಕಣ್ಮುಚ್ಚಿ ಕುಳಿತರೂನು ಕಾಣುವೆನು ನಿನ್ನನ್ನೆ
ನಿನ್ನನ್ನು ಸೇರುವ ತವಕದಲಿ ಮರೆವೆನು ನಾನನ್ನೆ  ||

ನಯನಗಳು ನುಡಿಯಲು ಅಣಿಯಾಯ್ತು ನಿನ್ನನ್ನು ನೋಡಿದ ಕ್ಷಣದಿಂದ
ನೀನೇಕೆ ಅರಿಯದೆ ದೂರನಿಂತೆ ನಿನ್ನಜೊತೆ ಜೀವನ ಕಳೆಯುವ ನನ್ನಿಂದ
ಇರುವೆನು ನಿನ್ನ ಎಲ್ಲ ಕೆಲಸಗಳಿಗೂ ಸ್ಪೂರ್ತಿಯಾಗಿ
ಸವೆಯುವೆ ನನ್ನೆಲ್ಲ ಜೀವನವನ್ನು ನಿನ್ನ ದಾಸಿಯಾಗಿ  ||

ಎಲ್ಲರು ಮೆಚ್ಚುಂತಹ ನಿನ್ನಯ ವರ್ತನೆ
ಮನಸಲಿ ನಿಂತು ಕನಸಲಿ ಕಾಡುವ ಹುಡುಗನೆ
ದುಷ್ಠ, ಚಟಗಳಿಂದ ದೂರನಿಂತ ನಿನ್ನ
ಸ್ಪಂದಿಸುವೆ ನನ್ನೆಲ್ಲ ನೋವಿಗು ಎಂದು ಬಯಸಿದೆ ನಿನ್ನನ್ನು  ||

Monday, April 9, 2012

|| ಮೃತ್ಯು ||

ಕಾಣದ ಮುಖವದು ಭಯದಲಿ ಕಾಡಲು
ಹಿಂದಿನಿಂದ ಎಚ್ಚರಿಸುತಿರಲು
ತಿಳಿಸದೆ ತನ್ನಿಚ್ಚೆಯಂತೆ ಬರುವ
ಎಲ್ಲೆಂದರಲ್ಲಿ ಆವರಿಸುವ ಸಾವಿಗೆ ಹೆದರಿ
ಸಭ್ಯರಾಗಿ ಬದುಕುವರೆಂದೂ ರೀತಿ ನೀತಿಯಲಿ ||

ಪ್ರಾಣ ಹೋಗುವ ಸಮಯಕೆ ತ್ರಾಣವು ಚೀರಲು
ಕಾರಣವೊಂದು ಸಮಯಕೆ ಒದಗಲು
ಪ್ರಾಣ್ಪಕ್ಷಿಯು ಹಾರಲು ತವಕಿಸಿ
ಅದೃಶ್ಯವಾಗುವುದು ಕಾಣದಹಾಗೆ
ದೇಹವೊಂದೇ ಉಳಿವುದು ನಿರ್ಜೀವವಾಗಿ ||

ಸೊಕ್ಕಿನಲಿ ನಡೆದರೂ, ದರ್ಪದಲಿ ಮೆರೆದರೂ
ಎಲ್ಲಾ ಕಾಲಕ್ಕೂ ಸುತ್ತಲೂ ಸಾವಿರ ಜನರಿದ್ದರೂ
ಮೂಲ ಕಾರ್ಯವ ಮರೆತು ಮೋಜಿನಿಂದ ಬದುಕಿದರೂ
ಧನ ನೀಡಿದರೂ ಎಲ್ಲೂ ದೊರೆಯದೆ ಇರುವ
ವಿಜ್ನಾನ ಬೇಧಿಸಲಾಗದೇ ಇರುವ ಸಂಗತಿಯು ||

ಕಾರ್ಯವ ಮುಗಿಸಿದ ನಂತರ ಹೊರಡಲೇ ಬೇಕು
ಮರಳಲಾಗದೇ ಇರುವ ಊರಿನ ಕಡೆಗೆ
ಆಡಿಸುವಾತನು ಆಟವ ಮುಗಿಸಿ ಟಾಟಾ ಮಾಡುವ
ಜೀವನ ನಾಟಕ ಮುಗಿಸುತ ಅವನು ಮಣ್ಣಾಗಿಸುವ
ಏನೂ ನಡೆಯದು ಕಾಲದ ಮುಂದೆ ಮೃತ್ಯುವಿಗೆ ಶರಣಾಗದೆ ||

|| ನೆರಳು ||

ಜೊತೆ ಜೊತೆಯಲ್ಲಿ ಹಿಂಬಾಲಿಸುವ
ಕೃಷ್ಣವಾಗಿ ಕಣ್ಣಿಗೆ ಕಾಣುವ
ಬೆಳಕಿನ ವಿರುದ್ಧವೇ ನಿಲ್ಲುವ
ಕಾಣುವ ಆಕಾರದ ತದ್ರೂಪವಾಗಿ ತೋರುವುದು ||

ತನ್ನ ಅಡಿಯಲ್ಲಿ ಬರುವವರಿಗೆ
ಶಾಖದಿಂದ ತಂಪನ್ನು ನೀಡುತ
ನಿರಾಳವಾದ ಹಂತದ ನಂತರ
ಉತ್ತೇಜನ ಕೊಡುವುದು ಮುನ್ನುಗ್ಗಲು ||

ನೆರವಾಗುವಷ್ಟು ಏತ್ತರದಲ್ಲಿ ನಿಂತಿರಲು
ಚಾಚುವ ಕೈಯನ್ನು ಮೇಲೆತ್ತಿಹಿಡಿದು
ತನ್ನಡಿಯಲ್ಲಿ ನೆಲೆಯನ್ನು ತೋರಿಸಲು
ಸಂತೋಷ ಮನದಲಿ ಛಾಯೆಯ ಅಡಿಯಲಿ ||

ಬಿಸಿಲಾಗಲಿ, ಮಳೆಯಾಗಲಿ ಸೂರಿನಲಿ ನಿಂತಿರಲು
ನಿರಾತಂಕದಿ ಮನ ಸೂರೆಗೊಳ್ಳಲು
ಆಸರೆಯನು ಏದುರು ನೋಡುವುದು ಏಕಾಂತವು
ನಿಸರ್ಗದ ನಿಯಮವು ನೀತಿಯನು ಹೊಂದಿಹುದು ||