Saturday, June 29, 2019

ಬಿಸಿಲು ಮಳೆ ಜೊತೆಯಾದಾಗ

ಮಂಗನ ಮದುವೆಯಾಗುವುದಂತೆ
ಮಳೆ ಬಿಸಿಲು ಜೊತೆಯಾದಾಗ
ಬದುಕಿನ ಗಾಲಿ ತಿರುಗುವುದಂತೆ
ನಮ್ಮಯ ಒಲವು ಬೆರೆತಾಗ
ಪ್ರೀತಿಯ ಪಯಣದ ದಾರಿಯಲಿ
ಮುನಿಸಿನ ತಡೆಯು ಸಹಜ ಬಿಡು
ಕನಸಿನ ಮಳಿಗೆಯು ತುಳುಕಿರಲು
ಹೃದಯಕೆ ತುಡಿತವು ತುಂಬ ದಡು

ಹರಿಯುವ ನೀರಿನ ತೇರಿನಲಿ
ಕಸ ಕಡ್ಡಿಯ ಕಥೆ ಅಳಿಯುವುದು
ಶುಭ್ರತೆ ನೆಲಸಿದ ನಾಡಿನಲಿ
ಧೂಳಿನ ಕಣ ಸಹ ಹಿರಿದಾಗುವುದು
ತುಚ್ಛತೆ ನೋಟವ ಮರೆಸುತಲಿ
ವೈಶಮ್ಯದ ಕೇಡನು ದೂರ ಇಡು
ಗೌಪ್ಯತೆ ಮಾತನು ಕೇಳುತಲಿ
ಗಂಭೀರತೆ ನಡೆಯಲಿ ಬೀಗಿ‌ ಬಿಡು

ಉದುರುವ ಎಲೆಗಳ ತುದಿಗಳಲಿ
ಮಳೆಹನಿ ನೀರಿದು ಬೀಳುವುದು
ಕಂಬನಿ ಭರಿತ ನಯನದಲಿ
ಎದುರಿಗೆ ಬರಲು ಅಂಜಿಕೆಯು
ಸಮಯಕೆ ಸುರಿದ ಸೋನೆಯಲಿ
ಅಳುಕಿನ ದುಃಖದ ಹಂಚಿಕೆಯು
ಹೆತ್ತವರ ಹಿತವನು ಬಯಸುತಲಿ
ಸುಖದಲಿ ಸಾಯಲು ದೀಕ್ಷೆತೊಡು

Monday, June 17, 2019

ಭಾವಯಾನದ ತೀರ

ಮೋಡಕೆ ಮೋಡ
ಗುದ್ದಿದಾಗ
ಮಿಂಚು ಮೊದಲು
ಬಂದಂತೆ
ಗುಡುಗು ನಂತರ
ಸಿಡಿದಂತೆ
ನಮ್ಮಿಬ್ಬರ ಪ್ರೀತಿಯಲ್ಲಿ
ಚರಣಗೀತೆ ಬರೆದಾಗ
ನೋವು ಸುಡುತಿದೆ
ಎದೆಯಲ್ಲಿ
ನುಡಿಯು ಕೇಳುತಿದೆ
ಕೊನೆಯಲ್ಲಿ
ಹೋದೆ ನೀನು ದೂರ
ಭಾವಯಾನದ ತೀರ

ತುಂಬಿದ ಕೆರೆಯ ನೀರನು
ಕದಡಲು ಕಲ್ಲು ಸಾಕು
ಮೊದಲ ಪ್ರೀತಿ ಮರ್ಲನು
ಮರೆಯಲು ಜನ್ಮ ಬೇಕು
ಕುಳಿತೆ ನಿನ್ನ ಧ್ಯಾನದಿ ನಾನು
ತೊರೆದೆ ಆಸೆ ಬಾಳಲಿ ಜೇನು

ತಂಪಿನ ಒಲವ ಉಣಿಸಲು
ಬರೆದ ಹಾಡು ನೂರಾರು
ಕಂಪಿನ ಭಾವ ರಮಿಸಲು
ಬೇಡಿದ ಜಾಡು ಹತ್ತಾರು
ಕಳಕೊಂಡ ಕರದ ರೀತಿಯಂತೇನು
ಬರವಣಿಗೆಯ ಪ್ರೀತಿ ಹುಚ್ಚಂತೆ ನೀನು

Thursday, June 6, 2019

ಒಲವ ಧಾರೆ

ಮೋಡಕೆ ಮೋಡ
ಗುದ್ದಿದಾಗ
ಮಿಂಚು ಮೊದಲು
ಬಂದಂತೆ
ಗುಡುಗು ನಂತರ
ಸಿಡಿದಂತೆ
ನಮ್ಮಿಬ್ಬರ ಪ್ರೀತಿಯಲ್ಲಿ
ಚರಣಗೀತೆ ಬರೆದಾಗ
ನೋವು ಸುಡುತಿದೆ
ಎದೆಯಲ್ಲಿ
ನುಡಿಯು ಕೇಳುತಿದೆ
ಕೊನೆಯಲ್ಲಿ
ಹೋದೆ ನೀನು ದೂರ
ಭಾವಯಾನದ ತೀರ

ತುಂಬಿದ ಕೆರೆಯ ನೀರನು
ಕದಡಲು ಕಲ್ಲು ಸಾಕು
ಮೊದಲ ಪ್ರೀತಿ ಮರ್ಲನು
ಮರೆಯಲು ಜನ್ಮ ಬೇಕು
ಕುಳಿತೆ ನಿನ್ನ ಧ್ಯಾನದಿ ನಾನು
ತೊರೆದೆ ಆಸೆ ಬಾಳಲಿ ಜಾನು

ತಂಪಿನ ಒಲವ ಉಣಿಸಲು
ಬರೆದ ಹಾಡು ನೂರಾರು
ಕಂಪಿನ ಭಾವ ರಮಿಸಲು
ಬೇಡಿದ ಜಾಡು ಹತ್ತಾರು
ಕಳಕೊಂಡ ಕರದ ರೀತಿಯಂತೇನು
ಬರವಣಿಗೆಯ ಪ್ರೀಲತಿ ಹುಚ್ಚಂತೆ ನೀನು

Tuesday, June 4, 2019

ಬೇಕಾಗಿದ್ದಾರೆ ಹನಿ ನೀರ ದಾಸೋಹಿ!

ಎಲ್ಲೆಂದು ಅರಸಲಿ
ಹನಿ ನೀರನು
ಯಾರನ್ನು ಕೇಳಲಿ
ತುಸು ಜಲವನು

ಕಂಬನಿಯ ಸುರಿಸಲೂ ನೀರಿಲ್ಲ
ಬರಿದಾದ ನದಿಯೊಡಲಲಿ 
ಕಾಲುವೇಲಿ ಹರಿಸಲೂ ಜಲವಿಲ್ಲ
ಆರಿರುವ ಏರಿಯೊಳಗೆ

ಬರಿದಾದ ಕೆರೆ ಕಟ್ಟೆಗಳು
ಭಾಸವಾಗಿವೆ ಇಂದು
ಚಿಣ್ಣರೆಲ್ಲರು ಆಟ ಆಡುವ
ಮೈದಾನವೇ ಇದೆಂದು

ನೀರ ಹನಿ ಬಿಂದುವಿಗಾಗಿ
ಶುರುವಾಗಿದೆಲ್ಲೆಡೆ ಹಾಹಾಕಾರ
ಲಗ್ನವಾಗಿಲ್ಲ ಜೊತೆಯಾಗಿ
ಹುಡುಕಿ ಹಿಡಿದರೂ ಕಪ್ಪೆ ಸಂಗದವರ

ಮಠ ಮಂದಿರಗಳಲಿ
ಇಳಿಮುಖವಾಗಿದೆ ಭಕ್ತರ ಸಂಖ್ಯೆ
ಊರೂರ ಬೀದಿಗಳಲಿ
ಮಾಡಬೇಕಾಗಿದೆ ನೀರ ದಾಸೋಹಿ ಸಖ್ಯ

ಕೇರಿಯಲೊಬ್ಬರಂತೆ ಸಿಗುತಾರೆ
ನೀಡಲು ಹಣದ ಸಾಲ
ನೀರಿಲ್ಲದೆ ಬವಣೆಯಲಿ ಬೇಯುತಾರೆ
ಏರುತ ದಾಹವೆಂಬ ಶೂಲ

ಅದೆಂದೂ ಬರುವುದೋ?
ಕರಿಮೋಡ ಕರಗಿ ನೀರಾಗಲು
ಬತ್ತಿದೊಡಲ ತುಂಬುತ
ಬೆಳೆಯುವ ಕೃಷಿಕನ ನಗಿಸಲು

ಕೈ ಮುಗಿದು ಬೇಡಿದರೂ
ಕರುಣಾಮಯಿಯ
ಕಲ್ಲಾಗಿ ಬರಲಿಲ್ಲ ಕರಿಮೋಡ
ಸರಿಸಲು ಜಲಧಾರೆಯ

Monday, June 3, 2019

ಮುಸ್ಸಂಜೆ ಕಲೆಗಾರ

ದೇವನೊಬ್ಬ ಕಲೆಗಾರ
ಜಗಕೆ ಆಯ್ತು ಉಪಕಾರ
ಸಂಜೆಗೊಂದು ವ್ಯವಹಾರ
ನಯನ ಸೆಳೆವ ಉಪಹಾರ
ತಂಪ ಬಾನ ಮಂದಾರ
ತೆರೆದ ಭಾನ ಶೃಂಗಾರ

ಮುಸ್ಸಂಜೆ ಹೊತ್ತಿಗಾರೋ
ಬಣ್ಣ ಬಳಿದು ಹೋಗುವರು
ಇಂಪೆಂಬ ಗಾನಕಾರೋ
ರಾಗ ಹೆಣೆದು ಹಾಡುವರು

ರವಿ ಹೊರಟ ದಾರಿಯಲಿ
ತಂಪನೆರೆವ ಚಿತ್ತಾರ
ಕವಿ ತೊರೆವ ಪದಗಳಲಿ
ಹಕ್ಕಿ ಗಾನಕೆ ಗಾಂಧಾರ

Sunday, June 2, 2019

ಮೀಸೆ ಚಿಗುರೋವಾಗ

ಏನೋ ಹುಚ್ಚು ವಯಸು
ಕಣ್ಣ ತುಂಬ ಕನಸು
ಸೂರೆಗೊಂಡ ಮನಸು
ನವ ಪ್ರೀತಿ ಸೊಗಸು
ಮನವೀಗ ಬಯಸಿರಲು
ಅವಳೇ ನನ್ನ ಉಸಿರು

ಮೀಸೆ ಚಿಗುರೋವಾಗ
ದೇಶ ಕಾಣದೆಂಬ ಮಾತೆ ನಿಜವು
ಆಸೆ ಮಿಡಿಯುವಾಗ
ವೇಷ ಯಾವುದೆಂಬ ಚಿಂತೆ ನಿಲುವು
ಅಂತೆ ಕಂತೆಯ ಕಥೆ ಕೇಳಿ
ಸ್ವಂತ ಬಂಟರ ವ್ಯಥೆ ಹೇಳಿ
ಎಚ್ಚರಿಸುವ ನುಡಿಯೇ ಗುರುವು

ಮಲೆಯ ಏರುವಾಗ
ನೆಲವು ಕಾಣದಂತೆ ಇರಲು
ತಲೆಯು ತಿರುಗುವಾಗ
ಜಗವು ಸುತ್ತಿದಂತೆ ಕಾಣಲು
ಅಂಟು ಗಂಟಿನ ನಡುವಲ್ಲಿ
ಉಂಟು ನಂಟಿನ ಮಡಿಲಲ್ಲಿ
ಮುದ್ದಿಸುವ ಮೂರ್ತವೆ ಒಲವು