Sunday, April 24, 2016

ಕೊನೆ ಕ್ಷಣಕೂ ಭರವಸೆ

ಬದುಕಿನ ಚೈತನ್ಯವು
ಈ ಜೀವದ ತ್ರಾಣ
ನೀನುಳಿಸು ನನ್ನ ಪ್ರಾಣ
ನಿನ್ನ ಖುಷಿಯ ಒಳಿತು
ನನ್ನ ಜನ್ಮದ ಗುರಿಯು
ಎಂದಿದ್ದ ನಾನೇ ಕೊಡಿತಿರುವೆ
ಮರೆಯಲಾಗದ ಉಡುಗೊರೆಯ

ಬೆವರ ಹರಿಸಿ
ಬೆಳಸಿದ ಗುಲಾಬಿ ಗಿಡವು
ಹೂ ಬಿಡುವ ಮನ್ನವೇ
ಎದೆಯಾಳ ಚುಚ್ಚಿತು
ಮದುವೆಗೆ ನೀ ಬಂದು
ನಮ್ಮನ್ನು ಹಾರೈಸು
ನೋವಾದ ಜಾಗಕೆ
ಹೂ ಎಸಲಿನಿಂದ ಸಂತೈಸು
ನೀನಿರದ ಹೊಸ ಬಾಳಲಿ
ನಲಿವಿರಲಿ ಎಂದು

ಜೊತೆಯಾಗಿ ಕಲ್ಪಿಸಿದ
ಉಡುಪನ್ನು ತೊಡುವೆ
ಬಿಳಿ ಪಂಚೆ ಶಲ್ಯಕೆ
ನೋವಿನ ಕಲೆಯಾದರೆ
ಮರೆಮಾಚುವೆ
ನಗು ಮೊಗದ ನಾಟಕಕೆ
ನೀ ಸೂತ್ರ ಹರಿದುಬಿಡು

ಆ ದೇವ ಅಂದಾನು
ಕೊನೆಯಲ್ಲಿ ತಥಾಸ್ತು
ನಾ ಮೆಚ್ಚಿ ಕೊಡಿಸಿದ
ಜರತಾರಿ ಸೀರೆಯಲಿ
ಬಂದುಬಿಡು
ನೋವಾದರೂ ನಾ ಕರೆದ
ನನ್ನ ಮದುವೆಗೆ