Saturday, April 28, 2012

|| ಧ್ಯಾನ ||

ಜಗದಿಂದಲೇ ಆರುತಿದೆ ಬೆಳಕು
ಆವರಿಸುತ ಬಂದಿದೆ ಕತ್ತಲು
ಏಂದೂ ಆರದಿರಲಿ ಈ ಹಣತೆ ||

ಸುಡೋ ಬಿಸಿಲಿನು ತರುವವನು ನೀನೆ
ಆ ಜಡಿಮಳೆಯನು ಸುರಿಸೋನು ನೀನೆ
ಎಂದು ಅಡಗದಿರಲಿ ಈ ಪ್ರಕೃತಿಯ ತಂಪು ||

ಕಾಣುವ ರಂಗಿನ ಕಾಮನಬಿಲ್ಲು
ರವಿಗೆದುರಾಗುವ ಅಂದದ ಬೆಳ್ಮುಗಿಲು
ನಿನ್ನ ಅಂದ ವೃಧ್ಧಿಸುವ ಆಭರಣಗಳು ||

ಮುಗಿಲ ಕ್ರೋಧವನು ತಣ್ಣಗಾಗಿಸು ಅತಿವೃಷ್ಠಿಯಿಂದ
ನೀರು,ತಂಪನು ನೀಡಿ ಬದುಕಿಸು ಅನಾವೃಷ್ಠಿಯಿಂದ
ಲೋಕವನು ರಕ್ಷಿಸು ಬರುವ ಪ್ರಕೃತಿ ವಿಕೋಪದಿಂದ ||

ಸದೃಢನನ್ನಾಗಿ ಮಾಡು ನನ್ನನು
ಎಣ್ಣೆಯನು ಒದಗಿಸಲು ಜ್ಯೋತಿಯಾರದಂತೆ
ನಿನ್ನ ಕೃಪಾಪೋಷಣೆಯಲ್ಲಿರುವ ಧ್ಯಾನಿಗಳು ನಾವೆಲ್ಲ ||

No comments:

Post a Comment