Thursday, June 19, 2014

|| ಕೊಟ್ಗೆಯ ಕಥೆ ||

ಒಂದು ಎರಡು
ಗಂಟಿಗಳೆಲ್ಲ ಬರಡು
ಮೂರು ನಾಲ್ಕು
ದಾಣಿ ಸಾಕು
ಐದು ಆರು
ಪುಕ್ಸಟೆ ಮಾರು
ಏಳು ಎಂಟು
ಬೇಕಪ್ಪ ಗಂಟು
ಒಂಬತ್ತು ಹತ್ತು
ಕೊಟ್ಟಿಗೆ ಎತ್ತು
ಒಂದರಿಂದ ಹತ್ತು ಹೀಗಿತ್ತು
ಕೊಟ್ಗೆಯ ಕಥೆಯು ಮುಗಿದಿತ್ತು

Friday, June 13, 2014

|| ತೊರೆದು ಹೊರಟಿರುವೆ ||

ಇಂಪಾದ ರಾಗದಲ್ಲಿ
ನನ ಮದುವೆಯ ಕರೆಯೋಲೆ
ನೀ ನೀಡು ಕೋಗಿಲೆ
ಗರಿ ಬಿಚ್ಚಿ ನಾಟ್ಯವಾಡಿ
ಆಕರ್ಷಿಸಿ ಸ್ವಾಗತವ
ನೀ ಕೋರು ನವಿಲೆ
ನಿಮ್ಮೊಂದಿಗೆ ನಾ ಕಳೆದ
ನೆನಪನ್ನು ಮೆಲಕುತ
ಇನಿಯನೂರಿಗೆ ನನ್ನ
ಕಳುಹಿಸಿಕೊಡ ಬನ್ನಿರೆ
ನಾ ಜೊತೆಯಾಗಿ
ಹೊರದುವ ಮುನ್ನ
ಬಳಿಬಂದು ಹರಸುತ
ಹೋಗಿ ಬಾ ಎಂದು
ಬಿಳ್ಕೊಡುವಿರಲ್ಲವೆ ||
ಹರಿವ ನೀರಿನಲಿ
ಮಿಂದು ಪುಳಕಿತನಾಗಲು
ತಾಯಿ ಶರಾವತಿಯ
ಕೃಪೆಯು ಇಹುದಲ್ಲವೆ
ವಿಶಾಲವಾದ ಗದ್ದೆಯಲಿ
ಬೆಳೆದಿರುವ ತೆನೆಯನ್ನು
ಕಿತ್ತು ತಿಂದು
ಬಲವಾಗಿ ಬೆಳೆದಿರುವುದು
ನಿಜವಲ್ಲವೆ ||
ಗುಡ್ಡ ಬೆಟ್ಟದಲಿ
ತುಂಬಿರುವ ಹಸಿರಿನಲಿ
ಅಡಗಿರುವ ನನ್ನ ಉಸಿರನ್ನು
ಧಾರೆಯೆರೆಯಿರಿ
ಹುಟ್ಟಿಂದ ಜೊತೆಯಿರುವ
ನಿಮ್ಮನ್ನು ನಾ
ತೊರೆದು ಹೊರಟಿರುವೆ
ಹರಸಿರಿ ನಮ್ಮನು
ಬಯಸಿರಿ ನಮ್ಮ
ಏಳಿಗೆಯನು ||

Thursday, June 5, 2014

|| ಭೂತ ಮರೆ ಸಿಹಿ ನೆನೆ ||

ನನ್ನೆದೆಯ ಅರಮನೆಯ
ಮುಂಬಾಗಿಲ ಕಾಯುತಿರುವ
ಕಾವಲಿಗ ನಾನು
ಒದರೊಳಗೆ ಕೂತಿರುವ
ಸಿಂಹಾಸನವ ಏರಿರುವ
ಮನದನ್ನೆ ಮನ್ನಿಸು
ನನ ತಪ್ಪನು
ಜೀವಕೆ ಉಸಿರಾಗು
ಬದುಕನ್ನು ನೀ ನೀಡು
ನನ್ನ ಜೀವದ ಸರ್ವಸ್ವವು
ನೀನಲ್ಲವೆ...||

ಬೈದಿರುವ ಮುಂಗೋಪಿ
ಎದುರಿನಲಿ ನಿಂತಿರುವೆ
ಜಗಳಾಟಕೆ ಕೊನೆಯೆಂದು
ಕ್ಷಮೆಯಲ್ಲವೆ
ಮುನಿಸನು ಮರೆತಿರುವೆ
ಮಳೆಯಲ್ಲಿ ನೆನೆದಿರುವೆ
ಪ್ರಮಾದಕೆ ಪರಿಹಾರ
ಉಳಿದಿಲ್ಲವೆ...||

ಕಡಲ ತೆರೆಯಲ್ಲು
ದಡ ಸೇರುವ ಕಸದಲ್ಲು
ನನ ಪ್ರೀತಿಯ ಕುಟುಕು
ನಿನಗಲ್ಲವೆ
ಕೆಟ್ಟಭೂತ ಮರೆಯುವುದು
ನೆಡೆದ ಸಿಹಿಯನ್ನು ನೆನೆಯುವುದು
ಐಕ್ಯತೆಯೆ ನಮ್ಮ ಬಾಳಿಗೆ ನೆರವಾಗೊ
ವರವಲ್ಲವೆ...||