Wednesday, July 31, 2013

|| ತಂತುರು ಮಳೆ ||

ಕರಿ ಮೋಡ ಕವಿದಾಗ
ಮರೆಯಾದ ಭಾಸ್ಕರನು
ಬೆಳಗಲು ತಡವಡಿಸುವ
ಆ ಚಂದ್ರ ಜೊತೆಯಾದರು ||

ನೀ ನನ್ನ ಸೇರಿದರೆ
ಸರಸದ ಜೀವನ
ನನ್ನಿಂದ ದೂರಾದರೆ
ವಿರಸದ ಕವನ ||

ಲಯವಿರದ ರಾಗಕ್ಕೆ
ಶೃತಿಯಿರದ ತಾಳವು
ಭಾವವಿರದ ಪದಗಳಿಗೆ
ಮನಸಿಚ್ಛೆಯ ಹೆಜ್ಜೆಯು ||

ಈ ತಂಪು ವೇಳೆಯಲಿ
ಆ ಸಂಪು ಇಭ್ಹನಿಯು
ವಿರಹವು ಕಾಡಿರಲು
ಒಂಟಿಯಾಗಿಹೆ ತಂತುರು ಮಳೆಯಲಿ ||

Saturday, July 27, 2013

|| ಮೂರ್ಖರ ಜೊತೆಗಿನ ಮಾತು ||

ದನವಿರದ ಕೊಟ್ಟಿಗೆಯಲಿ
ಸೊಪ್ಪು ಹಾಸಿದರೇನು
ಸಗಣಿಯಿಲ್ಲದೆ ಗೊಬ್ಬರವಾಗದು
ನೊಪ್ಪು ಒಣಗಿದ ದೆರಕಾಗುವುದು ||

ಬರಡಾದ ಭಾವಿಯಲಿ
ಕೊಡವ ಇಳಿಸಿದರೇನು
ಕುಡಿಯಲು ನೀರು ದೊರೆಯದು
ಗಂಟಲಿನ ದಾಹ ಇಂಗದು ||

ಗಂಧಗೊತ್ತಿರದ ಕತ್ತೆಯೆದುರು
ಕಿನ್ನರಿಯ ಬಾರಿಸಿದರೇನು
ತಿಳಿಯದು ಬುದ್ಧಿವಾದಗಳು
ಸಮಯದ ವ್ಯರ್ಥ ಶ್ರಮಗಳು ||

ಭಾವನೆಗೆ ಬೆಲೆಯಿರದ ಕ್ಷಣಗಳು
ಮೋಹದಲಿ ಮುಳುಗಿದ ಮೌನಗಳು
ಸಂಸ್ಕಾರ ಸಿಗದಿರುವ ಸಲಹೆಗಳು
ಮೂರ್ಖರ ಜೊತೆಗಿನ ಮಾತುಗಳು ||

Thursday, July 25, 2013

|| ಖಾಸಗಿ ಬದುಕಲಿ ||

ಬಣವಿಲ್ಲದ ಒಂಟಿಸಲಗ
ಬಿಸಲ ಉರಿಯಲಿ ಬಳಲಿ
ಹನಿ ನೀರಿಗೆ ಹುಡುಕಾಟ
ಯಾವ ನೆತ್ತರು ದಾಹಕೆ
ತಿರುಳಿಲ್ಲದ ಹೊತ್ತಿನಲಿ ||

ಕಲ್ಮಶದ ಹವೆಯನು ದೂರಾಗಿಸಿ
ದೂಳಿನ ಅಂಗಳವ ಗೂಡಾಗಿಸಿ
ಗಣಿ ಧಣಿಗಳ ದರ್ಬಾರಿನೂರಲಿ
ಗರ್ವ ಮರೆತು ಸಂಗದಲುಳಿದು
ಅರೆದಿನದ ಕರ್ತವ್ಯದಲಿ ತಂತ್ರಜ್ಞ
ಸ್ವಂತಜೀವನವೆಲ್ಲಿ ಖಾಸಗಿ ಬದುಕಲಿ ||

Tuesday, July 23, 2013

|| ಲೇಖನಿ ||

ಮುಖ ಬಿಡಿಯ ಅದರೇನಂತೆ
ಯಾರ ಎದುರು ಹೇಳದಂತೆ
ಗೌಪ್ಯದಿಂದ ತಿಳಿಸುವಂತೆ
ಭಾವ ಬರೆಯಲು ನೀನು ಬೇಕು ||

ಉಚಿತ ನಿನ್ನಯ ಕೆಲಸದಲ್ಲಿ
ವಿಷಯ ತಿಳಿಸುವೆ ಹಾಳೆಯಲ್ಲಿ
ಬೆಳಗುವ ಹಣತೆಗೆ ಎಣ್ಣೆ ಹಾಕು
ಬರೆಯುವ ಲೇಖನಿಗೆ ಶಾಯಿ ಬೇಕು ||

ವರ್ತಮಾನಕೆ ಸತ್ಯದ ಶೂಲ
ಜಾಗೃತಿ ಮೂಡಿಸೊ ಮೂಲ
ನಮೂದಿಸುವುದು ನಡೆಯುವ ಕಾಲ
ತೋರ್ಪಡಿಸುವುದು ಅಡಗಿರುವ ಬಿಲ ||

ಮೂಗನ ವೇದನೆ ಭಾವನೆ
ಅರುಹುವ ಮಾಧ್ಯಮ ಓಲೆನೆ
ಭಾವವೆ ಇಲ್ಲದ ಬರಹವ ಲೇಖಿಸಿ
ಸರಸಕೆ ವಿಸಸಕೆ ನಾಂದಿಯು ಲೇಖನಿ ||

Monday, July 22, 2013

|| ಬಣ್ಣದ ಹೆಜ್ಜೆ ||

ಅಂಬೆಗಾಲಿಡುತಲಿ ನಡೆದಾಗ
ಮೂಡಿದ ಕಾಮನಬಿಲ್ಲ ಕಿತ್ತು
ಬೇರ್ಪಡಿಸಿ ಅಂಟಿಸಿದ ಖುಷಿ
ಪದಗಳಿಗೆ ಸಿಗದ ನವೋಲ್ಲಾಸ ||

ಆಡುತ ಹೊಡೆದಾಡುತ ಕುಣಿದಾಗ
ಹಸಿರು ಕೆಂಪು ಬಣ್ಣಗಳ ನೋಟವು
ಸ್ವಲ್ಪ ಸಿಹಿ ಸ್ವಲ್ಪ ಹುಳಿಯ ನೆನಪು
ಮಾಸದ ಚಿತ್ತಾರದ ಪಯಣವು ||

ಕಲಿಕೆಯು ತೋರಣದ ಹಬ್ಬವು
ಉತ್ತೀರ್ಣತೆ ರಂಗಿನ ಸೊಗಸು
ಅನುತ್ತೀರ್ಣತೆಗೆ ಕರಿಯ ಮುನಿಸು
ಇದು ಕಪ್ಪು ಬಿಳುಪಿನ ಮಿನುಗು ||

ಸ್ನೇಹಿತರೊಂದಿಗೆ ಸವಿಯುವ ಸಮಯ
ಬಿಡಿಸಲಾಗದ ಗುಲ್ಲೆಬ್ಬಿಸುವ ಚಿತ್ರಗಳು
ಮನಸನರಿತ ಮಡದಿಯ ಸಂಗ
ಅಚ್ಚಳಿಯದ ಬಣ್ಣದ ಬದುಕು ||

ಬಾಳಿನೇಳಿಗೆಯು ಬಣ್ಣದ ಕಾಮನಬಿಲ್ಲು
ಬದುಕಿನ ತೊಳಲಾಟ ಶಿಲೆಯ ಕಲ್ಲು
ಏರಿಳಿತದಲಿ ಅನುಭವಿಸ ಬೇಕು ಲಜ್ಜೆ
ತಿರುಗಿ ನೋಡಲು ಬದುಕೊಂದು ಬಣ್ಣದ ಹೆಜ್ಜೆ ||

Saturday, July 20, 2013

|| ಜೊತೆಯಿರುವ ಬಯಕೆ ||

ಕಲ್ಪನೆಯಲಿ ನಿನ ರೂಪ ಎಷ್ಟು ಚಂದ
ಅರಿತಿಹೆನು ನಿನ ಮನವ ಮಾತಿನಿಂದ
ಸೆಳೆಯುವ ಸೊಗಸಿದೆ ಆ ಚಿಕ್ಕ ದೇಹದಲಿ
ವಿನೀತ ಭಾವನೆಯು ಆ ಚೊಕ್ಕ ಮನಸಿನಲಿ ||

ನನ್ನ ನಿನ್ನ ನೀತಿ ತತ್ವಗಳು ಒಂದೆ
ಗಮ್ಯಸ್ಥಾನ ತಲುಪುವ ದಾರಿಯೊಂದೆ
ನನಗಾಗಿ ಮಿಡಿಯುತಿಹ ಜೀವ ನಿಂದೆ
ಸೋಲಿನಲು ಸೋತಿಹೆನು ಪ್ರೀತಿಗೆಂದೆ ||

ನೋಡದೆ ನಲಿಯುವ ಜೀವದ ಭಾವವಿಂದು
ಪರಸ್ಪರ ಕಾಳಜಿಯ ತೆಗೆದುಕೊಂಡಿರುವುದು
ನಿನ್ನ ಕಷ್ಟ ಸುಖಗಳಲಿ ಪಾಲುದಾರನೆಂದು
ಪ್ರತಿಕ್ಷಣವು ಜೊತೆಯಿರುವ ಬಯಕೆ ನಮದು ||

Friday, July 19, 2013

|| ಸಂಶಯ ||

ಮನದಲಿ ಮೂಡಿದ ಅನುಮಾನ ಹೇಳಿತು
ನಾ ಬಂದಿರುವೆ ನಿನ್ನ ಮನ ಕೆಡಿಸಲು
ವಿಶ್ವಾಸವ ಕಳೆದುಕೊಂಡಿರುವೆ ಯೋಚಿಸದೆ
ನಂಬಿಕೆಯ ಮಾತು ನದುವಿನಲಿ ನೀರಾಗಿದೆ
ಪೂರ್ವಾಪರ ತಿಳಿಯದೆ ದುಡುಕಿರುವೆ
ಸದ್ದಿಲ್ಲದೆ ಸಹನೆಯಡಗಿದೆ ನನ ಹಿಂದೆ
ನೀ ಏನ ಮಾಡಲು ಸಾಧ್ಯ ನನ ಮುಂದೆ
ಎಲ್ಲರಿಗಿಂತಲು ನಾನು ಮೇಲಿರುವಾಗ ||

ಹೀರಿಹೆನು ನಿನ್ನ ಯೊಚನಾ ಶಕ್ತಿಯ
ಮರೆಸಿಹೆನು ನಿನ್ನಲ್ಲಿ ನಂಬಿಕೆಯ ಶಬ್ಧವ
ಬೆನ್ನೇರಿ ತಲೆ ಮೇಲೆ ಕುಳಿತಿಹೆನು
ಸಲಹೆ ಕೇಳದಂತೆ ಕಿವಿಯಲ್ಲಿ ಬೆರಳಿಟ್ಟಿಹೆನು
ವಿಚಾರ ಮಾಡುವ ಶಕ್ತಿಯನೆ ಕುಂದಿಸಿಹೆನು
ನೀನೇನೆ ಮಾಡಿದರು ನನ ಮೀರಿಸಲಾಗದು
ನೆಮ್ಮದಿಯ ಬಾಳಿಗೆ ತೊರೆಯ ಬೇಕು ನನ್ನನು
ಇಲ್ಲ ಶಂಕಿಸದೆ ಶರಣಾಗ ಬೇಕು ಸಂಶಯಕೆ ||

Thursday, July 18, 2013

ಪೀಳಿಗೆಯ ಹೊಸ ತಾಳ.... ಹೊಣೆ ಹೊರುವುದು ಕಾಲ....

ಸರ್ವ ಸಮಯದಲ್ಲು ಆಗುವಂತಹ ಘಟನೆ, ಸಾಮಾಜಿಕ ಬದಲಾವಣೆ, ಕೈ ಮೀರಿದ ವರ್ತನೆ, ಬಯಸದ ಬದಲಾವಣೆ ಇವೆಲ್ಲವುಗಳೆಲ್ಲವು ಸಂಭವಿಸಿದಾಗ ಎಲ್ಲರು ನುಡಿಯುವ ಮಾತು ಒಂದೆ ಅಗಿರುತ್ತದೆ ಮತ್ತು ವರ್ತಮಾನದ ವೈಪರಿತ್ಯದಲ್ಲಿ, ಭೂತದ ಬದಲಾವಣೆಯಲ್ಲಿ, ಭವಿಷ್ಯದ ನಿರೀಕ್ಷೆಗಳಲ್ಲಿ ಏರು ಪೇರು ಉಂಟಾದಾಗ ಅದರ ನೇರ ಹೊಣೆಗಾರಿಕೆ ಹೊರುವುದು ಕಾಲವಾಗಿರುತ್ತದೆ. ಇಂತಹ ದೂಷಣೆಗೆ ಅರ್ಥವಿಲ್ಲದಿದ್ದರೂ ವರ್ತಮಾನದ ಪೀಳಿಗೆಯವರು ಮಾಡುವಂತಹ ಕೆಲಸಕ್ಕೆ ಕಾಣದ ಕಾಲವು ದೋಷಿಯಾಗುತ್ತದೆ. ಇವೆಲ್ಲ ಹೇಗೆ ಎನ್ನುವುದಕ್ಕೆ ವಿವರಣೆಯಲ್ಲಿ ತಿಳಿಸುತ್ತಾ ಸೂಕ್ತ ಉದಾಹರಣೆ ನೀಡುತ್ತೇನೆ.

ನಮ್ಮ ಮನೆಗಳಲ್ಲಿ ಚಿಕ್ಕ ಮಕ್ಕಳು ಪ್ರತಿಭಾನ್ವಿತ ಪ್ರದರ್ಶನ ತೋರಿದಾಗ ನಾವು ಖುಷಿಯಲಿ ರಮಿಸುತ್ತೇವೆ. ಅವರ ಗುಣಗಾನ ಮಾಡುತ್ತ ಮಾತನಾಡುವಾಗ ಹೇಳುವುದು ಸಹಜವಾಗಿ ಈಗಿನ ಕಾಲದ ಮಕ್ಕಳೆ ಹೀಗೆ ತುಂಬ ಮೇಧಾವಿಗಳು, ಚಿಕ್ಕವಯಸ್ಸಿನಿಂದಲೆ ಜಾಣರಾಗಿರುತ್ತಾರೆ ಎಂದು ಉತ್ಪೇಕ್ಷೆಯ ಮಾತನ್ನಾಡುತ್ತೇವೆ.

ಪ್ರೀತಿಸಿ ಮದುವೆಯಾದಾಗ, ಪ್ರೀತಿಸಿದವರ ಹಿಂದೆ ಹೋದಾಗ, ಮನೆಯಲ್ಲಿ ಇಷ್ಟಪಟ್ಟವನನೆ ಬಾಳಸಂಗಾತಿಯಾಗಿ ಬೇಕು ಎಂದು ಹಠಮಾಡಿದಾಗ ಪರರು ಹೇಳುವುದು ಕಾಲದ ಜನಗಳೇ ಹೀಗೆ ಬಯಸಿದ್ದನ್ನ ಪಡೆಯದೆ ಸುಮ್ಮನಿರುವುದಿಲ್ಲ. ಎಲ್ಲ ಕಾಲದ ಮಹಿಮೆ ಎಂದು ಹಿಯಾಳಿಸುತ್ತಾರೆ.

ಬೇರೆ ಸಂಸ್ಕೃತಿಯ ಅನುಸರಿಸುತ, ಎಲ್ಲರಿಗಿಂತ ವಿಭಿನ್ನವಾಗಿ ಕಾಣುತ, ದುಷ್ಟ ಚಟಗಳ ದಾಸರಾಗಿ ವ್ಯಸನಿಗಲಾದವರನ್ನು ನೋಡಿ  ಅಂಥವರಿಗೆ ತಿಳುವಳಿಕೆ ಹೇಳುವದ ಬಿಟ್ಟು ಕಾಲ ಸರಿ ಇಲ್ಲವೆಂದು ಹೇಳುತ್ತ ಕಾಣದ ಕಾಲದ ಮೇಲೆ ಆರೋಪ ಮಾಡುವುದೆಷ್ಟು ಸರಿ...?

ಬೇರೆಯವರ ಮಾತು ಕೇಳಿ, ಸಂಗಾತಿ ಸಂಪ್ರೀತಿ ಸುಳಿಯಲ್ಲಿ ಸಿಲುಕಿ, ಬೇರಾವುದೊ ಆಮಿಶದ ವಶವಾಗಿ ಹೆತ್ತವರನ್ನ ಹೀನಾಯವಾಗಿ ಕಂಡು, ಉಳಿದವರನ್ನ ನಿರ್ಲಕ್ಷಿಸಿ ಬಾವಿಯೊಳಗಿನ ಕಪ್ಪೆಯಂತಾದಾಗ ಜನ ಹೇಳುವುದು ಕಾಲ ಕೆಟ್ಟೊಗಿದೆ ಎಂದು ತಮ್ಮ ಅಸಹಾಯಕತೆಯನ್ನ ಹೊರಹಾಕುತ್ತಾರೆ.

ಸಮಯ ಸಂದರ್ಭಕ್ಕೆ ತಕ್ಕಂತೆ ಪರಿಸ್ಥಿತಿಯ ಗುಲಾಮರಾಗುವ ಜನರ ವರ್ತನೆಗೆ ಕಾಣದ ಕಾಲವನ್ನೇಕೆ ಹೊಣೆಗಾರರನ್ನಾಗಿ ಮಾಡಬೇಕು...? ವರ್ತಮಾನದ ಪೀಳಿಗೆಯವರು ಮಾಡುವ ಮನದಿಶ್ಚೆಯ ಕಾರ್ಯಕೆ, ಬದಲಾವಣೆಗೆ ಕಾಲವನ್ನು ದೂಷಿಸುವುದು ಸರಿಯಾದ ಕ್ರಮವೇ...? ಅದು ಈಗಿನ ಕಾಲದಲ್ಲಾಗಲಿ ಅಥವ ಹಿಂದಿನ ಕಾಲದಲ್ಲಾಗಲಿ, ವರ್ತಮಾನದ ಜನ ಸಾಮಾನ್ಯರು ಮಾಡುವಂತಹ ಕೆಲಸ ಧನಾತ್ಮಕವಾಗಿರಲಿ ಅಥವಾ ಋಣಾತ್ಮಕವಾಗಿರ್ಲಿ ಅದರ ನೇರೆ ಹೊಣೆಗಾರಿಕೆಯನ್ನು ಕಾಲದ ಮೇಲೆ ಹೊರಿಸುವುದು ಎಲ್ಲೆಡೆ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಸಮಾಜದಲ್ಲಿ ಏನೇ ಆದರೂ ಅದಕ್ಕೆ ದೂಷಿಸುವುದು ಮಾತ್ರ ಕಾಲವನ್ನ, ಜನರು ಮಾಡುವ ಕರ್ಮಕೆ ಕಾಲವನ್ನು ದೂಷಿಸದೆ ಧನಾತ್ಮಕ ಚಿಂತನೆಗೆ ಅಣಿಯಾಗುವುದು ಸೂಕ್ತ. ಹೀಗಾಗಿ ಹೇಳುವುದು "ಪೀಳಿಗೆಯ ಹೊಸ ತಾಳ ಹೊಣೆ ಹೊರುವುದು ಕಾಲ". 

Wednesday, July 17, 2013

|| ಮನಸನರಿತವ ||

ಮುದುಕನಾಗಿದ್ದರು ಸರಿಯೆ
ಕಣ್ಣು ಕಾಣದಿದ್ದರು ಸರಿಯೆ
ಅಂಗವಿಕಲತೆಯಿದ್ದರು ಸರಿಯೆ
ಕೆಡುಕನಾಗಿದ್ದರು ಸರಿಯೆ
ಸಿಗಲಿ ನನಗೊಬ್ಬ ಪುರುಷ
ಹೊಸಬದುಕಲಿ ನೀಡುತ ಹರುಷ ||

ನನ ಜೀವಕೆ ಆಸೆಗೆ ಕನಸಿಗೆ
ಬೆಲೆ ನೀಡುವ ಸಹೃದಯದಿ
ನನ್ನೆಲ್ಲ ಗೌಪ್ಯಗಳ ರಕ್ಷಿಸುವವ
ನನ ಖುಷಿಯಲಿ ರಮಿಸುವವ
ನನಗಾಗಿ ತ್ಯಾಗ ಮಾಡುವವ
ಸಂಗಾತಿಯಾಗಲಿ ಮನಸನರಿತವ ||

|| ಸೂತ್ರ ಹೇಳಿದವರು ||

ಕಡಲುಗೋಲಿನ ಕಡೆತದಲ್ಲಿ
ಮೊಸರಲಿ ಬೆಣ್ಣೆಯ ಆಗಮನ
ಅದನು ಕಡೆಯಲು ನಿನ್ನ ಬಸಿರಲಿ
ಸುಂದರ ರೂಪದ ಜನನ ||

ಭತ್ತ ಮೆರೆಯುಲು ಒನಕೆಯಲ್ಲಿ
ಅನ್ನ ಸಿಗುವುದು ಅಕ್ಕಿಯಿಂದ
ಅದನು ಗೇರವುದು ಗೆರ್ಸಿಯಲ್ಲಿ
ಬೇರ್ಪಡಿಸಲು ಕಲ್ಲು ಕಸವ ||

ಬೀಸುಕಲ್ಲಿನಲಿ ಕಾಳು ಬೀಸುವುದು
ಗೋಮಯದಿಂದ ನೆಲ ಸಾರಿಸುವುದು
ಭಾವಿಯಿಂದ ನೀರ ಸೇದುವುದನು
ಮರೆತಿರುವಂತಿದೆ ನಮ್ಮ ಪೀಳಿಗೆ ||

ಒಲೆಯ ಅಡುಗೆಯ ಮರೆತರೆ ಹೇಗೆ
ಸುಖಕೆ ಅನಿಲದಡುಗೆಯು ಸಾಕೆ
ಸಿಗುವುದೇ ದೇಹ ವ್ಯಾಯಾಮ
ಕೈ ಕಾಲು ಸೊಂಟ ಕಂಠಕೆ ||

ಹಳಬರ ಮಾತಿನ ಅರ್ಥ ತಿಳಿಯದೆ
ಜರಿಯುವುದು ಸರಿಯೆ ಮೂರ್ಖರೆಂದು
ಅವಿವೇಕಿಗಳಲ್ಲ ನಮ್ಮ ಹಿರಿಯರು
ಅಜ್ನಾನಿಗಳಲ್ಲ ಸೂತ್ರ ಹೇಳಿದವರು ||

Tuesday, July 16, 2013

|| ಸ್ಮಿತೆಯ ಮೊಗದಲಿ ||

ಅರಿತೆ ನಿನ್ನೆಯ ಮನದ ಭಾವನೆ
ದೃಡತೆ ಇರುವ ನನ್ನ ಯೊಚನೆ
ಆದೆ ನೀನು ನನ್ನ ಸ್ನೆಹಿತೆ
ಕೇಳಿ ಸೋತೆ ನಿನ್ನ ಮನಸಿಗೆ
ಧಾರೆ ಎರೆವೆಯಾ ನಿನ್ನ ಪ್ರೀತಿಯ
ಶರಣು ಎನ್ನುವ ನನ್ನ ಬದುಕಿಗೆ ||

ಕಾಣದೆ ಪ್ರೀತಿಸಿಹೆ ನಿನ್ನ ಜೀವವ
ಮಾರುಹೋಗಿಹೆ ಅರಿತು ಮುಗ್ಧ ಗುಣವ
ಕದ್ದು ನೋಡಿಹೆ ನಿನ್ನ ಭಾವಚಿತ್ರವ
ಹೇಗೆ ವರ್ಣಿಸಲಿ ಸೆಳೆವ ಚಂದವ
ತಾರೆ ಮಿನುಗುವುದು ನಿನ್ನ ಕಣ್ಣಲಿ
ಹೂವ ಅಂದವು ಸ್ಮಿತೆಯ ಮೊಗದಲಿ ||

Thursday, July 4, 2013

|| ಮುಂಗಾರು ಮಳೆ ||

ನಡೆದಿದೆ ಅನ್ವೇಷಣೆಯ ಹೋರಾಟ
ಬದುಕಿನ ಬೆಳಕಿಗಾಗಿ ಹುಡುಕಾಟ
ಹೊನಲುಬೆಳಕಿನ ಕಾಂತಿಯಲು ಅರಸಿದೆ
ಮುಂಜಾವಿನ ತಿಳಿ ಬೆಳಕಿನಲು ಕಾಣದೆ ||

ವೃದ್ಧಿಸುತ್ತಿವೆ ಪ್ರತಿ ಕ್ಷಣದ ನಿರೀಕ್ಷೆಗಳು
ಬದುಕಲಿ ಬಯಕೆಯ ಭರವಸೆಗಳು
ಚಂಡಾಟದಂತೆ ತಪ್ಪದಿರಲೆಂಬ ತುಡಿತವು
ಆಸೆ ಕೈಗೂಡಲೆಂಬ ಮನಸಿನ ಮಿಡಿತವು ||

ನೀರಿರದ ಮರುಭೂಮಿಯಲಿ ಮಳೆಯಾದಂತೆ
ಬಯಲು ಭೂಮಿಯಲಿ ಕಾಮನಬಿಲ್ಲು ಮೂಡಿದಂತೆ
ಬರಡು ಭೂಮಿಯಲಿ ಹಸಿರು ಚಿಗುರೊಡೆದಂತೆ
ಕಲ್ಪಿಸಿದ ನೀ ಬರಲು ಮುಂಗಾರು ಮಳೆಯಾದಂತೆ ||

Fact...


The Thinking and Expectations will not be perfect as the practical which happen in life... It is the fact.

Wednesday, July 3, 2013

|| ಮುಚ್ಚಿಡ್ಲಾ ||

...ಡ್ರಾಮಾ ಚಿತ್ರದ "ಚಂದುಟಿಯ ಪಕ್ಕದಲಿ" ಹಾಡಿಗೆ ನನ್ನ ಸಾಲುಗಳು...

ಮುಚ್ಚಿಡ್ಲಾ

ತುಸು ಕಂಡು ನಿನ ಮೊಗವ
ನಸು ನಗುತ ಬಂದಿಹನು
ಬೆಳದಿಂಗಳಾರತಿಯ ಬೆಳಗಿಹನು...

ಈ ತಂಪು ನಡುಗೆಂಪು
ಮಲ್ಲಿಗೆಯ ಹೂ ಕಂಪು
ಕೇಳುತಲಿ ಈ ಹಾಡು ಬಲು ಇಂಪು...

ಬಚ್ಚಿಟ್ಟ ಮಾತೊಂದು ಮನಸಲ್ಲಿ
ಬಿಚ್ಚಿಡುವೆ ಅದ ನಿನ್ನ ಎದುರಲ್ಲಿ
ಉಗುಳದಿರು ಹುಚ್ಚುತನ ನನದೆಂದು ||

ಬರೆದಿರುವ ಕವನದಲಿ
ಭಾವ ನಾನಾಗಿರುವೆ
ಅನುಭವಿಸಿ ಹಾಡೆನ್ನ ಮುದನೀಡುವೆ...

ಜೀವನದ ಪಯಣದಲಿ
ದೂರ ನೀ ಹೋಗದಿರು
ಜೊತೆ ನಡೆವ ಸೌಭಾಗ್ಯ ನನದಾಗಲಿ...

ನಯನದಲಿ ನೀರಾಗಿ ಅಡಗಿರ್ಲಾ
ಮಾತಿನಲಿ ಪದವಾಗಿ ಹೊರಬರ್ಲಾ
ನೀ ನನ್ನ ಬದುಕೆಂದು ಹೇಳ್ಬಿಡ್ಲಾ ||

ಆಗಾಗ ಹೇಳುವೆನು
ಕಂಬನಿಯ ಒರೆಸುವೆನು
ನಿನಗಾಗಿ ನಾನಿರುವೆ ಕಾವಲಿಗೆ ಎಂದು...

ಚಳಿಯಲ್ಲು ಬೆವೆತಿಹೆನು
ಮಳೆಯಲ್ಲು ನೆನೆದಿಹೆನು
ಗುಮ್ಮನಾಟದಲಿ ನಾ ಸೋತಿರುವೆನೆಂದು...

ಹಸಿರಿನಲಿ ಹಸೆಮಣೆಯ ಹಾಕಿರ್ಲಾ
ಗರಟೆಯಲಿ ಹಣತೇನ ಹಚ್ಚಿಡ್ಲಾ
ಮುತ್ತಿನಲೆ ಮಾಂಗಲ್ಯ ಕಟ್ಬಿಡ್ಲಾ ||

ಕಟ್ಟಿಟ್ಟ ಕೊಳಲಿನ
ರೂಪದಂತಾಗಿಹೆನು
ಬಿಚ್ಚಿ ನುಡಿಸೆನ್ನನು ಧ್ವನಿಯಾಗಿ ಬರಲಿ...

ಈ ನಿನ್ನ ಜೀವದ
ಉಸಿರು ನಾನಾಗಿರುವೆ
ಮುಖದಲ್ಲಿ ಮೂಗಂತೆ ಎದುರಲ್ಲಿ ಇರ್ಲಾ...

ವಿಶ್ರಾಂತಿ ಇಲ್ದಂಗೆ ಜೊತೆಗಿರ್ಲಾ
ತುದಿಯಲ್ಲಿ ಜೇನಂತ  ಮಾತಾಡ್ಲಾ
ಇದ ಮುಕ್ತಾಯ ಮಾಡದೆ ಮುಚ್ಚಿಡ್ಲಾ ||