Tuesday, April 18, 2017

ಪಯಣದಲ್ಲಿ ನಾನು ಮತ್ತು ಆವಳು


ಸಂಜೆ ಗಂಟೆಗೆ ಕದಂಬ ಬಸ್ ಹೊರಟಿತು ಮೈಸೂರಿನಿಂದ ಗೋವಾದ ಕಡೆಗೆ. ಬಸ್ಸಿನ ಮಧ್ಯದಲ್ಲಿ ಕೂರಲು ಜಾಗ ಗಿಟ್ಟಿಸಿಕೊಂಡು ಪುಶ್ ಬೇಕ್ ಸೀಟಿನಲ್ಲಿ ಮಲಗಿದ. ಸರಿ ಸುಮಾರು .೩೦ರ ಸಮಯಕ್ಕೆ ಮೈಸೂರಿನಿಂದ ಹೊರಟ ಬಸ್ ಹಾಸನವನ್ನು ತಲುಪಿತು. ಆಗ ಒಂದು ಹುಡುಗಿಯ ಪ್ರವೇಶವಾಯಿತು ಬಸ್ಸಿನೊಳಗೆ. ಅವಳನ್ನು ನೋಡಿ ಮತ್ತೆ ಪುನಃ ಸುಮ್ಮನೆ ಮಲಗಿದ. ಪಯಣಿಸುತ್ತಿದ್ದ ಬಸ್ಸಿನಲ್ಲಿ ಹೆಣ್ಣು ಧ್ವನಿಯ ಕೂಗು, ಬೈಗುಳ ಕೇಳಿತು. ಆಗ ಎದ್ದು ಹಿಂದುಗಡೆ ನೋಡಿದ ನಾನು ಅವಳ ಸಿಟ್ಟು, ಕಿರಿಕಿರಿ ಅನುಭವಿಸಿದ ಬೇಸರದ ಭಾವ ಗೋಚರಿಸಿತು.

ಪರಿಸ್ಥಿತಿಯ ಗಂಭಿರತೆಯನ್ನು ಅರಿತ ನಾನು, ಅವಳ ಪಕ್ಕದಲ್ಲಿ ಕುಳಿತಿದ್ದ ಮಧ್ಯಮ ವಯಸ್ಸಿನ ಕುಡಕನಿಗೆ ತರಾಟೆ ತೆಗೆದುಕೊಂಡೆ. ಪ್ರಶ್ನಿಸಲು ಪ್ರಾರಂಭಿಸಿದ ನಂತರ ಇಡಿ ಬಸ್ಸಿನಲ್ಲಿ ಕುಳಿತಿದ್ದ ಜನರೆಲ್ಲರೂ ಅವನಿಗೆ ಬಯ್ಯುತ್ತ ಹೊಡೆಯಲು ಮುಂದಾದರು. ಸಮಯದ ಗಂಭಿರತೆಯನ್ನು ಅರಿತು ತಕ್ಷಣದಲ್ಲೆ ಕುಡುಕನನ್ನು ಬಸ್ಸಿನಿಂದ ಕೆಳಗಿಳಿಸಿದ ನಾನು ಹುಡುಗಿಯ ಹತ್ತಿರ ನಿನ್ನ ಅಭ್ಯಂತರವಿಲ್ಲದಿದ್ದರೆ ನನ್ನ ಪಕ್ಕದಲ್ಲಿರುವ ಆಸನದಲ್ಲಿ ಕುಳಿತುಕೊಳ್ಳಿಯೆಂದು ಹೇಳಿದ. ನಾನು ಹೇಲಿದಂತೆ ಅವಳು ಬಂದು ನಾನುವಿನ ಪಕ್ಕದಲ್ಲಿ ಕುಳಿತಳು. ಅವರಿಬ್ಬರೂ ಸಹ ಮೌನದ ಪ್ರಯಾಣ ಪ್ರಾರಂಭಿಸಿದರು.

ಮಂದೆ ಸಾಗಿದ ಬಸ್ ಊಟಕ್ಕೆಂದು ಪರಿಚಯವಿರದ ಸ್ಥಳದಲ್ಲಿ ನಿಂತಿತು. ಅಲ್ಲಿಯ ಊಟ, ಊಟದ ವ್ಯವಸ್ಥೆ, ಊಟದ ಜಾಗ ಇವೆಲ್ಲವನ್ನು ನೋಡಿದ ನಾನು ಬಾಳೆಹಣ್ಣುಗಳನ್ನು ಖರೀದಿಸಿ ಬಸ್ಸಿನೆಡೆಗೆ ಹಿಂದುರುಗಿದ. ನಾನು ಹೋಗಿ ಕೂತಾಗ ಅವಳು ಕೇಳಿದಳು ಊಟ ಮಾಡುವುದಿಲ್ಲವೇ? ಉತ್ತರಿಸುತ್ತ ನಾನು ಹೇಳಿದ ಸ್ವಚ್ಚವಿರದ ಸ್ಥಳದಲ್ಲಿ ಊಟವಲ್ಲ ಚೂರು ನೀರು ಕುಡಿಯಲು ಮನಸೊಪ್ಪುವುದಿಲ್ಲವೆಂದ. ಹೌದು ಎನ್ನುತ್ತ ಅವಳು, ತಾನು ತಂದಿದ್ದ ಊಟದ ದಬ್ಬವನ್ನೆ ನಾನುವಿನೊಂದಿಗೆ ಹಂಚಿಕೊಂಡಳು. ಅಲ್ಲಿಂದ ಶುರುವಾಯಿತು ಅವರಿಬ್ಬರ ಮಾತುಕತೆಯ ಹರಟೆ.

ತಮ್ಮ ತಮ್ಮ ಪರಿಚಯವನ್ನು ವಿನಿಮಯ ಮಾಡಿಕೊಂಡ ಅವರಿಬ್ಬರು ತಮ್ಮ ಆಸಕ್ತಿ, ವಿಚಾರಗಳನ್ನು ಹೇಳಲಾರಂಭಿಸಿದರು. ನಾನು ಹೇಳುತ್ತ, ಉತ್ತಮ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸಮಾಡುತ್ತಿರುವುದಾಗಿ ಹೇಳಿದ. ಹಾಗೆ ಮುಂದುವರಿಸುತ್ತ ತನ್ನ ಹಿಂದಿನ ದಿನಗಳ ಚಿಕ್ಕ ಪುಟ್ಟ ಹೋರಾಟದ ನಡೆಯನ್ನು ಹೇಳಿಕೊಂಡ. ವಿದ್ಯಾರ್ಥಿಯಾಗಿದ್ದಾಗಿನಿಂದ ವಿದ್ಯಾರ್ಥಿ ಗುಂಪಿನ ಮುಂದಾಳುವಾಗಿ ಗುಂಪನ್ನು ಮುನ್ನಡೆಸಿಕೊಂಡು ಬಂದ ಸಂಗತಿಗಳನ್ನು ವಿವರಿಸಿದ. ಅಲ್ಲದೆ ಮಹಿಳೆಯರ ಕುರಿತಾಗಿ ಇರುವ ತನ್ನ ವಿಚರಧಾರೆಯನ್ನು ಸಮರ್ಥವಾಗಿ ತಿಳಿಸಿದ. ಇದರಿಂದಾಗಿ ಅವಳಿಗೆ ಒಬ್ಬ ಒಳ್ಳೆಯ ವ್ಯಕ್ತಿಯೊಂದಿಗೆ ಪರಿಚಯವಾಯಿತು ಮತ್ತು ಗುಣವಂತನ ಗೆಳೆತನವಾಯಿತೆಂದು ಸಮಾಧಾನಿಸಿದಳು.

ಅವಳು ತನ್ನ ಬಗ್ಗೆ ಹೇಳಿಕೊಳ್ಳುತ್ತಾ ಪದವಿಯನ್ನು ಮುಗಿಸಿ ಉದ್ಯೋಗ ಮಾಡುತ್ತ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೇನೆನ್ನುತ್ತಾಳೆ. ಅಲ್ಲದೆ ಇವಳು ಸಹ ನಾನು ಹೇಳಿದ ವಿಚಾರಗಳಿಗೆ ಸಂಬಂಧಿಸಿದ ಮಾತುಗಳನ್ನಡುತ್ತಾ ತನ್ನ ಸಹ ಮತವನ್ನು ಸೂಚಿಸುತ್ತಾಳೆ. ಹಾಗೆ ಹೇಳುತ್ತಾ ತಾನು ಎಲ್ಲಿಗೆ ಹೊರಟಿರುವುದಾಗಿ ಹೇಳುತ್ತ ತನ್ನ ಸದುದ್ದೇಶದ ವಿಷಯವನ್ನು ಅರಹುತ್ತಾಳೆ. ತನಗೆ ಇರುವ ಸವಾಲುಗಳನ್ನು ಹೇಳುತ್ತ ಏನಾದರೂ ಸಲಹೆಗಳು ನಿನ್ನಲ್ಲಿವೆಯಾ ಎಂದು ಕೇಳುತ್ತಾಳೆ. ಅದಕ್ಕೆ ಪ್ರತ್ಯುತ್ತರಿಸುತ್ತಾ ನಿನ್ನ ಸವಾಲುಗಳಿಗೆ ಯೋಚಿಸಿ ತನ್ನ ಸಲಹೆಗಳನ್ನು ಕೊಡುತ್ತೇನೆ ಎನ್ನುತ್ತಿರುವಾಗ ಚಹ ಕುಡಿಯಲೆಂದು ಬಸ್ ನಿಲ್ಲುತ್ತದೆ.

ಬಸ್ಸಿನಿಂದ ಕೆಳಗಿಳಿದ ಇಬ್ಬರೂ ಎಳನೀರನ್ನು ಕುಡಿಯುತ್ತಾರೆ. ಕುಡಿಯುವ ಸಮಯದಲ್ಲಿ ಅವಳಿಗೆ ಇವನಂತಹ ಹುಡುಗನು ತನಗೆ ಜೀವನದ ಜೊತೆಗಾರನಾಗಿ ಸಿಗಬೇಕೆಂದು ಅನಿಸಿದರೂ ಅವನ ಸಹಜತೆಯ ಮಾತುಗಳನ್ನು ಗಮನಿಸಿ ಒಳ್ಳೆಯ ಸ್ನೇಹಿತೆಯಾಗಿ ಉಳಿಯುವುದು ಉತ್ತಮವೆಂದುಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಸಾಗಿದ ಬಸ್ ಇವರಿಬ್ಬರ ಹರಟೆಗೆ ಪೂರ್ಣ ವಿರಾಮವನ್ನಿಡಲು ಮುಂದಾಗುತ್ತದೆ. ಯಾಕೆಂದರೆ ನಾನು ಇಳಿಯುವ ಸ್ಥಳ ಹತ್ತಿರವಾಗುತ್ತಿದ್ದಂತೆ ಇಬ್ಬರ ಮೊಬೈಲ್ ನಂಬರ್ ಹಂಚಿಕೆಯಾಗುತ್ತದೆ.

ಅಚಾನಕ್ಕಾಗಿ ಜೊತೆಯಾದ ಅವರಿಬ್ಬರೂ ತಮ್ಮ ಪರಿಚಯವನ್ನು ಗೆಳೆತನವನ್ನಾಗಿಸಲು ಇಚ್ಛಿಸುತ್ತಾರೆ. ಅಲ್ಲಿಂದ ಮರಳಿದ ನಂತರ ಮೊಬೈಲ್ ಕರೆಯ ಮೂಲಕ ತಮ್ಮ ಗೆಳೆತನವನ್ನು ಮುಂದುವರೆಸುತ್ತಾ ಪರಸ್ಪರರೂ ಅವರವರ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾ ಒಬ್ಬರಿಗೊಬ್ಬರು ಸಲಹೆ ಸೂಚನೆಗಳನ್ನು ಕೊಟ್ಟಿಕೊಳ್ಳುತ್ತಾ ಉತ್ತಮ ಗೆಳೆಯರಾಗಿ ಮುನ್ನಡೆಯುತ್ತಾರೆ.

No comments:

Post a Comment