Thursday, October 24, 2013

|| ಬಡತನದ ಬೆರಳು ||

ಬಡತನದ ಅರಮನೆಯ
ನಡುವಿನಲಿ ಕುಳಿತಿದೆ
ಅಕ್ಕಿಯನು ಆರಿಸುತಿರುವ
ಉಂಗುರವಿಲ್ಲದ ಬೆರಳು ||

ನುಚ್ಚಿನಲಿ ನುಸುಳುತ್ತ
ಕಲ್ಲನ್ನು ಅರಸುತ್ತ
ಗೆರಸಿಯಲಿ ಹುಡುಕುತಿದೆ
ಸಿಂಗಾರವಿಲ್ಲದ ಕೊರಳು ||

ಕಾರ್ಪಣ್ಯದಲಿ ಕಾಣದಿರಲಿ ಕಷ್ಟದ ಕನಸು
ಅಗದು ಮೆರೆಯುವ ಐಶ್ವರ್ಯದ ನನಸು
ಬಾಳಿನಲಿ ಬಾರದ ಭಾಗ್ಯವನು ಬಯಸುವುದು
ಇಚ್ಛಿಸಬಾರದು ಕೈಗೆಟುಕದ ಮಾಯಾಮೃಗಕೆ ||

ಮಂಕಾಗಿ ಮುಕ್ತವಾದ ಬದುಕಿನಲಿ
ಯಾರ್ಯಾರ ಪರಿಚಾರಣೆ ಮಾಡಲಿ
ಇನ್ನು ಅರಿವಿಗೆ ಬಾರದ ಗುಪ್ತಗಾಮಿನಿ
ಅಸುನೀಗಿ ಆಗಬಾರದೇ ಮುಕ್ತ ಮುಕ್ತ ||

ಅಕಿಂಚನತೆಯಲಿ ಏನನ್ನು ಯೋಚಿಸಲಿ
ಪಡೆಯಲಾಗದು ಬೇಕಾದ ರಿಕ್ತತೆಯನು
ಹಾರುವ ಮನಸನ್ನು ಮಲಗಿಸುತ
ಕಜ್ಜದಲಿ ಮಗ್ನವಾಯ್ತು ಬಡತನದ ಬೆರಳು ||

2 comments:

  1. ಕೆ.ಎಸ್.ನ ಭಾವಕ್ಕೆ ನಿಮ್ಮ ಸಾಲುಗಳ ನುಡಿ ನಮನ.

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.

      Delete