Monday, September 23, 2019

ಬೇಸರದ ಬಾವ

ನನ್ನ ಕೊಳಲಿನ ನಾದಕ್ಕೊಂದು
ಸೋತ ಮೊಗ್ಗು ಅರಳಿದೆ
ಅವಳು ಕರೆಯಲು ನಾನು ಬರುವೆನು
ಕೃಷ್ಣಾ ಎಂದು ಧ್ಯಾನದಿ....

ಮಡದಿಯರೆಷ್ಟು ಇದ್ದರೇನು
ಪ್ರೀತಿ ಸೆಳೆತ ನಿನ್ನದು
ಭಕ್ತರೆಷ್ಟು ಬಂದರೇನು
ಭಕ್ತಿ ಮೊರೆತ ಬಂಧವು

ಹರಿವ ನದಿಯ ತೀರದಲ್ಲಿ
ಜೋತು ಮರದ ಟೊಂಗೆಗೊಂದು
ಕಟ್ಟಿ ತೂಗುವೆ ಉಯ್ಯಾಲೆಯ
ಮುದದ ಮರಕೆ ಬುನಾದಿಯ

ಕಾದು ಕುಳಿತಿಹ ಮನಕೆ ಎಂದು
ಬೇಸರದ ಭಾವಕೆ ನಾಮ ರಾಧೆ
ಅರಿತು ಬಾಳುವ ಜೋಡಿಗೆಂದು
ಸದೃಶವಾಗುವ ಯುಗ್ಮ ನಾವು

No comments:

Post a Comment