Wednesday, June 21, 2017

ಮುದಕೆ ಭಂಗ

ಹೂವು ಅರಳುವ ಘಳಿಗೆ ಸುಳಿಯಿತು
ಮನದ ನೋವ ಮರೆಯಲು
ಮೊಗ್ಗು ಚಿಗರುವ ಕಾಲ ಬಂದಿತು
ಮುದಕೆ ಭಂಗ ಮಾಸಲು

ಮುಕ್ತ ಮನಸಿನ ವೇದನೆಯೆಲ್ಲೋ
ಗುಪ್ತವಾಗಿಡಲು ಬಯಸಿದೆ
ಸುಪ್ತ ಯಾತನೆ ಆವರ್ತನೆಯಲ್ಲೋ
ಸಪ್ತ ಸಾಗರ ಎದುರಾಗಿದೆ

ನಿಶ್ಚೇಷ್ಟ ಕಾರ್ಯದ ಹೊತ್ತ ಹಣಿಯಲು
ನಲಿವಿನ ನಾಟಕ ಅಳಿಯಲಿ
ಅರೆ ಅರಿವಿನ ಅಂಧಕಾರ ಅಳಿಸಲು
ವಿವೇಕದ ಬೆಳಕು ಹರಿಯಲಿ

No comments:

Post a Comment