Tuesday, June 20, 2017

ಸ್ವಾನುರಾಗವ ತೊರೆದು

ಸುತ್ತದಿರು ತೀರ್ಥಯಾತ್ರೆಗೆಂದು
ಹಲವಾರು ದೇವಾಲಯವ ದೇಶವ್ಯಾಪಿ
ಸಾಯದಿರು ಸ್ವಾರ್ಥಿ ಹತಾಶಿಯೆಂದು
ನಿನ್ನೊಳಗಿರುವ ದೇವ ಭಾವವ ಮರೆತು
ಪ್ರೀತಿ ವಿಶ್ವಾಸದ ಕರುಣೆಯ ತೊರೆದು
ನಿನ್ನ ಅಹಮ್ಮಿನ ಕೋಟೆಯಲಿ ಮೆರೆಯುದಿರು

ಹಸಿವು ಎಂದವರಿಗೆ ಕೈ ತುತ್ತನಿಡು
ಯಾಚಿಸಿದವರಿಗೆ ಸಹಾಯ ಹಸ್ತ ಕೊಡು
ತಾನು ತನ್ನದೆಂಬುವ ಮೋಹ ಬಿಡು
ಇರಲಿ ನನ್ನವರೆಂಬುವ ನಿಸ್ವಾರ್ಥದ ಬೀಡು

ಕಾಣದ ದೇವನಿಗೆ ಹಂಬಲಿಸದಿರು
ಪರೋಪಕಾರಿಯಾಗುತ ಜೀವಿಸಿರು
ದೀನರ ಪಾಲಿನ ದೇವ ನೀನಾಗುವೆ
ನೆಮ್ಮದಿ ಕಾಣುತ ಅಜರಾಮರನಾಗುವೆ

ಬೆಳಕಾಗು ಬೇಡುವ ಬಡವರ ಪಾಲಿಗೆ
ರಕ್ಷಕನಾಗು ಅನಾಥರ ಬದುಕಿಗೆ
ಊರುಗೋಲಾಗು ವೃದ್ಧರ ಬಾಳಿಗೆ
ಸ್ವಾನುರಾಗವ ಆಲಾಪಿಸದೆ ಗಂಧರ್ವನಾಗು

No comments:

Post a Comment