Thursday, May 16, 2013

|| ಧನ್ಯೋಸ್ಮಿ ||


ನೋಡಿದೆ ಹೀಗೊಂದು ಮಾಹಿತಿಯ
ಯೋಚಿಸಿದೆ ಇದಾಗಬಹುದೆಂಬ ಸಂಗತಿಯ
ಕಳುಹಿಸಿದೆ ನನದೊಂದು ಕವಿತೆಯ
ನೆನೆಯುತ್ತ ಮನದಲ್ಲಿ ಪಾರ್ಥಸಾರಥಿಯ ||

ವಿಷಯಗಳ ಬಿತ್ತರಿಸಿದ್ದು ಮೂರು ''
ಅರಿಯದೆ ನಿರಾಕರಿಸಿದವ ಮೂರ್ಖ
ಪರಿಷ್ಕರಿಸಿ ನಿರ್ಣಯವಾಯಿತು ಪುಸ್ತಕ
ಬಂದಿತು ಬಿಡುಗಡೆಯ ದಿನ ಅಂದು ವೈಶಾಖ ||

ಲೋಕಾರ್ಪಣೆಯ ದಿನದವರೆಗೆ ಪಡೆದದ್ದು
ಬೇರೆಯವರ ಹಸ್ತಾಕ್ಷರ
ಬಿಡುಗಡೆಯ ದಿನದಿಂದ ನೀಡುವಂತಾಯಿತು
ಬೇರೆಯವರಿಗೆ ಹಸ್ತಾಕ್ಷರ
ನಾದಬ್ರಹ್ಮನ ನೋಡುತ್ತ ಕಣ್ತುಂಬಿತು
ನುಡಿಮುತ್ತು ಕೇಳುತ್ತ ಕಿವಿತುಂಬಿತು ||

ನೂರು ಕವಿಗಳ ಕವನಗಳು ಒಂದೆಡೆ
ತವಕದಲಿ ಮನ ತಿರುಗಿತು ಕಡೆ
ಜಗ ನೋಡಲು ಬಂದಿತು ಶತಮಾನಂಭವತಿ
ಶ್ರಮಿಸಿದ ಜೀವಗಳಿಗೆ ಹಾರೈಕೆಯು "ಶತಸಹಸ್ರಮಾನಂಭವತಿ" ||

No comments:

Post a Comment