Wednesday, April 3, 2013

|| ಆಶೀರ್ವದಿಸು ||


ದೀನ ನಾನು ದಾನಿ ನೀನು
ಮೋಕ್ಷವನ್ನು ನೀಡೆಯಾ
ಭಜಿಪ ಭಕ್ತರ ಪೊರೆವ ನಿನ್ನಯ
ಬಣ್ಣಿಸಲಾಗದು ಮಹಿಮೆಯ ||

ಸೋತ ಘಳಿಗೆ ಅಡಗಿ ಅಜ್ನಾತದಿ
ಧ್ಯಾನಿಸಿ ಮರಳಿ ಬಂದಿರಲು ಭಯದಿ
ಅಭಿನಂದಿಸಲು ಕಾದಿಹರೆಲ್ಲರ ನೋಡಿ
ನಿನ್ನ ಕರುಣೆಯ ಪಸರಿಸುವೆ ಜನರ ಕೂಡಿ ||

ನೀರ ಮೇಲಿನ ಗುಳ್ಳೆಯ ನಂಬಿ
ಮನೆಯ ಕಟ್ಟಿರಲು ಭದ್ರತೆಗೆ ಕಂಬಿ
ಗುಳ್ಳೆ ಒಡೆದು ಮನೆಯು ಉರುಳಿತು
ತೇಲಲು ತೆಪ್ಪ ಕಳುಹಿಸಿದೆ ಬದುಕಿಸಲು ||

ಹಲವು ಬಗೆಯಲಿ ಜಗವು ಕಾಡಿರಲು
ಹೇಗೆ ಬದುಕಲಿ ಕಲ್ಮಶವೇ ಉಸಿರಲು
ನಿನ್ನ ಭಜನೆ ನಿರತ ಮಾಡಿರಲು
ಉಸಿರಿಲ್ಲದೆ ಬದುಕುವಂತೆ ಹರಸಿದೆ ||

ಎಲ್ಲ ಹಂತದಲು ಪ್ರತಿ ಕ್ಷಣದಲು
ಸಾಯದಂತೆ ಜೀವವ ಕಾದಿದೆ
ತಂದೆ ಶರಣು ನರಹರಿ ನಾರಾಯಣ
ಆಶೀರ್ವದಿಸು ನೀಚನಾಗದಂತೆ ನನ್ನನು ||

No comments:

Post a Comment