Friday, August 31, 2012

|| ಕಾಲಾಯ ತಸ್ಮೈ ನಮಃ ||

ಹುಟ್ಟಿವ ಜೀವಿಯು ಭುವಿಗೆ ಬಂದಾಗ
ಕಾಣುವನು ತೊಂದರೆ ತೊಡಕುಗಳನ್ನ
ಅನುಭವಿಸುವನು ಸುಖ ದುಖಃಗಳನ್ನ
ಜನುಮದ ಘಳಿಗೆಯು ಚನ್ನಾಗಿರಲು
ಮೆರೆಯುವನೆಂದು ಮಹಾರಾಜನಂತೆ
ಪರಿವರ್ತಿತವಾಗಿ ಕೆಡುಕಾಗಿರಲು
ಜೀವನ ಸವೆಯುಬೇಕು ಹಾವಾಗಿ
ಯಾವ ಸಮಯದಿ ಎನಾಗುವುದೆಂದು
ಹೇಳಲಾಗದು ಯಾರಿಂದಲು
ಬಂದಂತೆ ಬದುಕಲು ಕಲಿತರೆ
ಜೀವನ ಅರಳುವುದು ಹೂವಂತೆ
ಹರಡುವುದು ಘಮಘಮಿಸುವ ಸುವಾಸನೆಯು
ಯಾವ ಘಳಿಗೆಯಲಿ ಎಳುವುವರೊ
ಯಾವ ಕ್ಷಣದಲಿ ಬೀಳುವರೊ
ಸ್ವಂತ ಜೀವಕೆ ತಿಳಿಯದೆ ಹೋದರೂ
ಕಾಲ ನಿರ್ಣಯಿಸುವುದು ತಾತ್ಪರ್ಯವ ||

No comments:

Post a Comment