Wednesday, August 16, 2017

ಕರಡಿದೆಯಾ ಕೆಸರ

ಎಸೆದೆಯಾ ಸಣ್ಣ ಕಲ್ಲನು
ಕರಡಿದೆಯಾ ಕೆಸರ ಮಣ್ಣನು
ನಗುತಿರುವ ಶಿಶುವ ಅಳಿಸುವೆಯಾ?
ಪೂರ್ಣ ಚಂದ್ರನ ಚೂರಾಗಿಸುತ
ಸಂಸ್ಕರಿಸಲು ಸಾಕು ಕ್ಷಣ ಹೊತ್ತು
ಒಂದಾಗಲು ಬೇಕು ಆಣಿಮುತ್ತು

ಈ ಸಂಜೆ ಯಾಕೆ ಹೀಗೆ
ಕಲೆಯಲ್ಲಿ ಸೆಳೆಯುತಿದೆ ಮನವ
ಓ ರವಿಯೇ ಜೋಕೆ ಹಾಗೆ
ಮಂದ ಬೆಳಕಿನಲ್ಲಿ ಜಾರು ನಿಧಾನ
ಬೋರ್ಗರೆಯವ ಕಡಲ ಕಿನಾರೆ
ಗರ್ಜಿಸುವ ಸಾದುಮೃಗದ ತರಾನೆ
ಸರಿಸಾಟಿ ಯಾರು ಇಲ್ಲ
ಕನವರಿಸುವ ಮೂಲ ಬೊಂಬೆಗೆ

ಸ್ಪಂದಿಸಲು ಸಿಗದೆ ಸ್ವಲ್ಪ ಸಮಯ
ಹುಂಬತನದಿ ಅತಿ ನಂಬಿದೆಯ
ನಿರೀಕ್ಷೆಯ ಬಾಳಿನ ಸಂಜೆಯಲಿ
ಸೂರ್ಯ ಮುಳುಗುವ ಹೊತ್ತಾಗಿದೆ
ಉಸಿರಿನ ವೇಗಕೆ ಮೂಡುವ ಚಿತ್ರವು
ಮುಂದಿನ ಬದುಕಿಗೆ ಜೊತೆಯಾಗುವುದೇ?

ನೆನಪಿನ ಸಾರಾಂಶ ಭವಿಷ್ಯದ ಮುಖ್ಯಾಂಶ
ಹಲವು ಚಿಂತನೆಯು
ಮಂಥನಕೆ ಅಣಿಯಾಗಿರಲು
ಅವಳು ಸಿಗುವಳು ಎನ್ನುತಿದೆ

No comments:

Post a Comment