Friday, January 27, 2017

ರಾಧಾಂತರಾಳ

ದಾಸವಾಳವು ಬರೆಯುತಿಹುದು
ಗೋಪಿಕೆಯ ಅಂತರಾಳದ
ಭಾವನೆಯನು
ಗೋಪಾಲನಿಗೆ ತಿಳಿಸಲು
ದುಂಬಿ ಸಂದೇಶ
ಕಳುಹಿಸುತಿಹುದು

ಹಸುವಿನ ಬಾಯಲ್ಲಿ ಅಂಬಾ
ಮೋಹನ ಕೊಳಲಿನ ನಾದ
ಜೊತೆಯಾಗಿ ಸೆಳೆಯುತಿಹುದು
ಮುದುಡಿದ ಮನವನು
ಅತ್ತಿತ್ತ ಅರಸಿಹಳು ರಾಧೆ
ವಿಹರದ ಬೇಗೆಯನು ತಾಳದೆ

ಗೋಪನಿರದೆ ಗೋಪಿಕೆಯ
ಮೊಗವು ಬಾಡಿದೆ
ತೋರವಾಗದಂತೆ ಸೋತಿದೆ
ಬಾಹುವಿನಲಿ ಬಂಧಿಸುವ
ಹಂಬಲದ ಮೊನೆಯು
ಚುಚ್ಚುತಿಹುದು ಮನಕೆ

ಜಲಕ್ರೀಡೆಗೆಂದು ತುಂಬಿದ
ನೀರಲ್ಲೂ ಕೆಸರು
ಬಳಸಲಾಗದಂತೆ ಕರಡಿದೆ
ಅರುಹುತಿಹುದು ಜಗಕೆ
ಕೃಷ್ಣನಿರದೆ ರಾಧೆಯ
ಬದುಕೆಲ್ಲ ಬರಡು

No comments:

Post a Comment