Tuesday, March 17, 2015

ತುಸುಗೆಂಪು ಆಗಸವು
ಕೋಪದಲಿ ಮುನಿಸಿರಲು
ರವಿಯ ಇರುವಿಲ್ಲದೆ
ಬಾನಿನ ಮಡಿಲು ತುಂಬುವ
ಭಾಸ್ಕರನು ಬರುತಾನೆ ಎಂದು
ಇಳೆಯಲ್ಲಿನ ಜೀವಿಗಳು ಕಾಯುತ
ನಿಶಾಚರಿಗಳಿಗೆ ವಿದಾಯ ಹೇಳಲು
ಬೆಳ್ಳು ಮೂಡುತಿರಲು ಹರುಷದಲಿ
ದಿನಚರಿಗೆ ಅಣಿಯಾಗುತಿರುವವರಿಗರಲ್ಲಾ
ಶುಭೋದಯದ ಸಮಯದಲಿ
ಶುಭದಿನದ ಶುಭ ಕಾಮನೆಗಳು

2 comments:

  1. ಎಂತಹ ಲಯವಿರುವ ರಚನೆಯಿದು.

    ReplyDelete
    Replies
    1. ಧನ್ಯವಾದಗಳು ಬದರಿ ಸಾರ್

      Delete