Thursday, March 19, 2015

ನಿನಗೆ ಅರ್ಪಣೆ

ಹೃದಯವೆಂಬ ದೀವಿಗೆಯಲಿ
ನೀನು ಬಂದು ಕೂತಿಹೆ
ಅದರ ಒಳಗಿನ ಕೋಣೆಯಲ್ಲಿ
ನಿನ್ನ ಒಲವದು ತುಂಬಿದೆ
ಸೋತ ಮನಸಿಗೆ ನೀಡು ಸಾಂತ್ವನ
ಗೆಲುವು ಎಂದೂ ನಿನ್ನದೇ
ಅರಳುವ ಮೊಗ್ಗದು ಹೂವು ಆಗದೇ
ಪ್ರೀತಿಯೆಂಬ ಹೆಸರಲಿ

ನನ್ನ ಮಾತು ಹಿಂಸೆಯಾದರೆ
ಮೌನಿಯಾಗಲು ಬೇಸರಿಸೆನು
ನಾನು ಎಂದೂ ಮುಖ್ಯವಲ್ಲ
ಬಯಸನೇನು ಬದುಕಲು
ನನ್ನ ಖುಷಿಗೆ ಇಡಲು ತರ್ಪಣ
ಧಾರೆ ಎರೆಯುವೆ ನೆಮ್ಮದಿನು

ನನ್ನ ಜೀವಕೆ ಕೊಡದೆ ಪ್ರಾಮುಖ್ಯತೆ
ನಿನ್ನ ಖುಷಿಗೆ ನೀಡು ಪ್ರಾಧಾನ್ಯತೆ
ನೀನು ನಗಲು ಸಂತೋಷ ಪಡಲು
ಸ್ವರ್ಗ ಭಾಸವು ನನ್ನ ಮನದಲಿ
ಗುರಿಯು ಒಂದೇ ಗುಣವು ಒಂದೇ
ನಾನು ರಮಿಸ ಬೇಕು ನಿನ್ನ ಖುಷಿಯಲಿ

ಬಿಡು ನೀನು ಯೋಚಿಸುವುದ
ತಿಕ್ಲುವಂತ ನನ್ನ ಬಗೆಗೆ
ಬೀಳದೆಂದು ಕೆಟ್ಟ ಕನಸು
ನಿದ್ರೆಗೆಂದು ತೊಡಕಾಗದು
ಕೊಡೆನು ಹಿಂಸೆ ಮಾತಾಡಿ ನಿನಗೆ
ಪಡುವೆ ಹಿಂಸೆಯ ಬದಲು ನಾನೇ

ನನ್ನ ಜೀವವಿರುವ ತನಕ
ಬದುಕುವೆ ನಿನ್ನ ಖುಷಿಗೆ ಸವೆಯುತ
ಸತ್ತ ಮೇಲು ಕೊಡೆನು ನಿನಗೆ
ಅಂತ್ಯಸಂಸ್ಕಾರದ ತೊಂದರೆಯನು
ನೀನು ಬದುಕಬೇಕು ಸ್ವಾವಲಂಬಿಯಾಗಿ
ನನ್ನಮ್ಮನ ನಂತರ ನಾ ಅಳಿಯಲು

2 comments:

  1. ಅರ್ಪಣಾ ಗೀತೆಯ ಸಕಾರಾತ್ಮಕ ನಿಲುವು ಮತ್ತು ಇಲ್ಲಿ ತೋರುವ ಆಶಾಭಾವವು ಇತರರಿಗೂ ಮಾದರಿಯಾಗುವಂತಿದೆ.

    ಅರೇ, ಈ ತಿಕ್ಲುವಂತ ಪದ! ಎಲ್ಲಿಂದ ತಂದ್ರೀ? :-)

    ReplyDelete
    Replies
    1. ಮೊದಲು ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು... ತಿಕ್ಲು ಎನ್ನುವ ಶಬ್ದವು ಆಡು ಭಾಷೆಯಗಿದೆ... ತಿಕ್ಲು = ಹುಚ್ಚ (Loose) ಎಂದರ್ಥ.

      Delete