Tuesday, December 24, 2013

ಹಣತೆ ಆರಿದಾಗ

"ಮರೆಯಾಯಿತೊಂದು ದೇಹ ಪದಗಳಲ್ಲಿ ಸೆಳೆಯುತ" ಡಾ|| ಜಿ ಎಸ್ ಶಿವರುದ್ರಪ್ಪನವರೆ ನೀವು ನಮ್ಮನ್ನು ಅಗಲಿ ಭೌತಿಕವಾಗಿ ಮರೆಯಾಗಿರಬಹುದು ಆದರೆ ನೀವು ಬರೆದ ಸಾಲುಗಳೆಂದು ಚಿರವಾಗಿರುತ್ತದೆ ನಮ್ಮೊಂದಿಗೆ. ನಿಮ್ಮ ಕವಿ ಹೃದಯಕ್ಕೆ ನನ್ನ ನಮನಗಳು. ಅಗಲಿದ ನಿಮ್ಮ ದೇಹಕ್ಕೆ ನನ್ನ ಶ್ರದ್ಧಾಂಜಲಿಗಳು.
ನಿಮ್ಮ ಸಾಲಿನಿಂದ ಪ್ರೆರೇಪಿತನಾಗಿ ಬರೆದ ಈ ಕೆಳಗಿನ ಕವಿತೆಯನ್ನು ನಿಮಗೆ ಅರ್ಪಿಸುತ್ತೆನೆ.


ಆವರಿಸಿದೆ ನಡುಗತ್ತಲು
ದೀಪವಾರಿದಾಗ
ಹಚ್ಚುತ್ತೇನೆ ಹಣತೆಯನ್ನು
ಮಬ್ಬು ಮುಸುಕುವಾಗ
ಉರಿವ ದೀಪ ಕತ್ತಲಲ್ಲಿ
ವದನಭಾವ ನೋಡಲೆಂದು...

ನಿನ್ನ ರೂಪು ನಯನ ಕಲಕಿ
ತುಂಬಿತೊಂದು ಚಿತ್ರವ
ನಮ್ಮ ಕಣ್ಣು ಎದುರುಬದರು
ಮುಖವ ನೋಡಿ ತಣಿಯಲು
ಮುಗುಳುನಗೆಯು ತುಟಿಗಳಲ್ಲಿ
ನೀನು ನನ್ನದೆಂದು ಬೀಗಲು...

ಜೀವ ಬೆರೆಯಲು ಕತ್ತಲಾಯಿತು
ಎಣ್ಣೆ ಮುಗಿಯಲು ಬುಡದಲಿ
ಏನು ಕಾಣದೆ ಎಲ್ಲಿ ಹುಡುಕಲಿ
ಯಾರು ಎಂದು ತಿಳಿಯದೆ
ನಾನು ಯಾರೊ ನೀನು ಯಾರೊ
ಕಾಣದಿರಲು ಹಣತೆಯಾರಿದಾಗ...

2 comments:

  1. ಅಗಲಿದ ಚೇತನಕ್ಕೆ ಶ್ರದ್ಧಾಂಜಲಿಗಳು. ಸುಂದರ ಭಾವ ನಮನ.

    ReplyDelete