Thursday, August 8, 2013

|| ಮಾಡಲಾಗದು ||

ಹಸಿರಿಲ್ಲದೆ ಉಸಿರಾಡುವಾಗ
ಮರುಭೂಮಿಯಾದರೇನು
ಪ್ರೀತಿಯಿಲ್ಲದೆ ಬದುಕುವಾಗ
ಮಸಣವೆ ಮನೆಯಾದರೇನು
ಸಿಡಿಲುರುಳಿ ರಂದ್ರವಾದಾಗ
ಮಳೆಹನಿಯಿಂದ ಮುಚ್ಚುವುದೇನು ||

ಪಸಲು ಬಿಡುವ ಕ್ಷಣದಲ್ಲಿ
ಕ್ರಿಮಿ ತಿಂದರೆ ಶ್ರಮವ್ಯರ್ಥ
ತೆನೆ ತೂಗಲು ಗಾಳಿಯಲಿ
ಬೀಜವುದುರಿದರೆ ದುರಾದೃಷ್ಟ
ಒರತೆಯಿರದ ಕೆರೆಯಲ್ಲಿ
ನೀರು ತುಂಬಿಸಲಾಗುವುದೆಷ್ಟು ||

ನಂಬಿಕೆಯಿಂದ ಬದುಕಿನಲಿ
ವೈಮನಸ್ಸಿನ ಶಯನವು
ಮೂಗ ಕೊಯ್ದರೆ ಸಿಟ್ಟಿನಲಿ
ಶಾಂತವಾದಾಗ ಮರಳದು
ಬೇಡದಿರುವುದು ನಡೆದಲ್ಲಿ
ಬೇಕಾಗುವುದ ಮಾಡಲಾಗದು ||

3 comments:

  1. ಧೀಶಕ್ತಿ ಮುಖ್ಯ ಅಲ್ಲವೇ....

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
    2. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete