Thursday, April 14, 2011

|| ಸ್ಪೂರ್ಥಿ ಗೀತೆ ||

ಕಾಣದ ಮನಸದು ಕೈಗಳ ಚಾಚಿ ಕರೆಯುತಿದೆ
ಆದರು ಎದೆಯಲಿ ಮರೆಯದ ನೋವೆ ಕೆದರುತಿದೆ ||

ಸುಪ್ತ ಮನಸಲಿ ಅರಿಯದ ಭಾವನೆ ಮೂಡುತಿದೆ
ಅದು ಗುಪ್ತಗಾಮಿನಿಯ ವೇಷದಲಿ ಮೆರೆಯುತಿದೆ ||

ಹಣೆಯ ಬರಹಗಳ ಓದಲು ಆಗದು ಎಂದೆಂದು
ಹಾಗೆ ಪ್ರೀತಿಯ ಬರಹವ ಅಳಿಸಲಾಗದು ಮುಂದೆಂದು ||

ಪಡುವಣ ಸೂರ್ಯನ ಕಿರಣಗಳಲ್ಲಿ ಹೊಸಬೆಳಕು
ಕಾಣುವ ಕನಸಿದು ಊರುಳುತಿದೆ ಪ್ರತಿ ಇರುಳು ||

ನೀನು ತಿಳಿಯಲೆ ಬೇಕು ಆಗುವುದೆಲ್ಲ ಒಳ್ಳೆಯದಕ್ಕೆ
ಮುಂದೆ ನಡೆಯುವುದೆಲ್ಲವು ಸೂತ್ರದಾರನ ಆಶಯದಂತೆ ||

No comments:

Post a Comment