Thursday, April 14, 2022

ಶ್ರಮಿಸೇ ಮೇಲಕೇರು

ತೆರೆದ ಬಾವ ಭಕುತಿಯಲ್ಲಿ

ನುಡಿಯೆ ಅದರ ಖ್ಯಾತಿಯ

ಜನಿಪನಾವ ಧರಣಿಯಲ್ಲಿ

ಶ್ರಮಿಸೇ ಮೇಲಕೇರುವ


ಬಗರಿಯಾಟ ಬದುಕಿನಲ್ಲಿ

ತಿರುಗಿ ಸೇರಿ ನಿಲ್ಲಲು

ಗೋಲ ಭೂಮಿಯ ವೃತ್ತದಲ್ಲಿ

ಬಿಟ್ಟ ಜಾಗ ತಲುಪಲು


ಸತ್ತ ಮನಸಿನ‌ ಸುತ್ತಲಲ್ಲಿ

ಭಾರಿ ಬಯಕೆಯು ಉಳಿವುದೇ?

ಸೋತ ಕನಸಿನ ವ್ಯಥೆಗಳಲ್ಲಿ

ಕೊನೆಯಿದೆಂದು ಲೆಕ್ಕವೇ?


ನುಡಿವ ಭಕ್ತಿ ಶೋಕಿಗಾಯ್ತು

ಬಗರಿಯಾಟ ಬದುಕಿಗಾಯ್ತು

ಸತ್ತ ಮನಸಿಗಿಲ್ಲ ಬಯಕೆಯು

ಬಂದು ಹೋಗಲು ಲೆಕ್ಕ ಚುಕ್ತವು

No comments:

Post a Comment