Thursday, August 15, 2019

ಎಲ್ಲೋ ಮಳೆ

ಎಲ್ಲೋ ಮಳೆಯು
ಇನ್ನೆಲ್ಲೋ ಹೊಳೆಯು
ಇದುವೆ ಜೀವನ ಗಾಥೆಯು
ಮಹಾ ಮಳೆಗೆ
ಉತ್ತರ ತತ್ತರ
ಮಲೆನಾಡ ಅಳಲಿಗೆ
ಕರಾವಳಿ ಕಂಪನ
ಎಲ್ಲಿಂದ ಎಲ್ಲಿಗೋ
ಪ್ರವಾಹದ ಬಂಧನ

ಗುರುತಿನ ಸೂಚಕ
ಮನುಜನ ಮುಖವಿದು
ಉತ್ತರ ಎತ್ತರ
ಗಮನವ ಸೆಳವುದು
ನೆರವಿನ ಆದ್ಯತೆ ಪಡೆವುದು

ಈಶಾನ್ಯ ಕಡಲಿನ ಕನ್ನಡ
ನರಳಿದೆ ತರತಮ ಧೋರಣೆಗೆ
ಸಿಗದು ಟಿ.ಆರ್.ಪಿ ಮಾಧ್ಯಮಕೆ
ರಾಜಕೀಯ ಲಾಭವಿಲ್ಲ ಪಕ್ಷಗಳಿಗೆ
ನಿರ್ಲಕ್ಷದ ಗೂಡಾಗಿದೆ ಕರಾವಳಿ

ಬೆಟ್ಟ ಗುಡ್ಡಗಳು ಎರಗಿದೆ
ರಾಜ್ಯ ಸರ್ಕಾರವು ಮಲಗಿದೆ
ಸುರಿದ ನೀರು ಹರಡಿ ತುಂಬಿದೆ
ರಸ್ತೆ ಇಕ್ಕೆಲಗಳು ಬಿರಿದಿದೆ
ಪ್ರಜೆಗಳ ಬದುಕಿದು ಸೊರಗಿದೆ

No comments:

Post a Comment