Tuesday, January 22, 2019

ಪರ್ವಕಾಲ

ಆ ಸೂರ್ಯ ತೊರೆದ ಕಳ್ಳ ಹಾದಿಯ
ಈ ಭೂಮಿ ಕ್ರಮಿಸಲು ಸರಿ ದಾರಿಯ
ಹಗಲೆಂಬ ಹೊತ್ತು ಹೆಚ್ಚಾಗಲು
ಇರುಳೆಂಬ ಕೆಡುಕು ದೂರಾಗಲು
ಬಾಳೆಂಬ ತೇರು ಜೊತೆ ಸಾಗಲಿ

ಒಳ್ಳೊಳ್ಳೆ ಕೆಲಸ ಸಂಧಿಸಲಿದೋ ಬಂದಿದೆ
ಉತ್ತರಾಯಣದ ಪರ್ವಕಾಲ
ಹುಳುಕೆಂಬ ಬಂಡೆ ಕರಗುತ ಅಳಿಯಲಿದೆ
ನಾನು ನನ್ನದೆಂಬ ಅಹಮ್ಮಿನ ಶೂಲ

ಬೆಳೆದ ಬೆಳೆಗೆ ಸಿಗಲಿ
ಹೊಸ ಆಸೆ ಈಡೇರಿಸುವ ದರ
ಸುಗ್ಗಿಕಟ್ಟಿ ಕುಣಿಯಲಿ
ರಸ ಬಾಧೆ ಅಡಗಿಸುವ ಕರ

ಎಳ್ಳು ಬೆಲ್ಲವ ತಿಂದು ಒಳ್ಳೆ ಮಾತಾಡಬೇಕೆಂಬುದು
ಬರಿ ಮಾತಾಗದಿರಲಿ
ಜಲಸೆಯಿಂದ ಎಗರಿ ವಲಸೆ ಹೋಗದ
ನಿಸ್ವಾರ್ಥದ ಬದುಕಿಗೆ ನಾಂದಿಯಾಗಲಿ

ಬೆಳಗಲಿ ಜಗದ ಜ್ಯೋತಿಯು
ಆರದ ನಂದಾದೀಪವಾಗಿರಲು
ಗುಡಿಸಲಿ ಮನದ ತೊಚ್ಛೆಯನು
ಸ್ವಚ್ಛ ಸಮೃದ್ಧಿಯ ಗುಡಿಯಾಗಿರಲು

No comments:

Post a Comment