Sunday, December 30, 2018

ಸಸ್ಯ ಸಾಮರಸ್ಯ

ಜಾರದಿರಲಿ ಹನಿ ನೀರು
ಬೊಗಸೆಯಿಂದಾಚೆಗೆ
ಬುದ್ಧಿಯಿರಲಿ ಒಂಚೂರು
ಸ್ಥಾನಮಾನದಿಂದೀಚೆಗೆ

ಕಡಿಯದಿರು ಹೆಮ್ಮರವ
ತಂಪೆರೆಯುವ ಮೂಲವ
ಕದಡದಿರು ಜಗ ನಿಯಮವ
ಕಾಪಾಡು ಪ್ರಾಣಿ ಸಂಕುಲವ

ಬಾಯಲ್ಲಿ ಬಡಾಯಿ ಕೊಚ್ಚಿ
ಸ್ವಪ್ರತಿಷ್ಠೆ ವೈಭವೀಕರಿಸದಿರು ಮೂಢ
ಕಾದಿಟ್ಟ ದಿನದಂದು ಫಲಕವ ಹಚ್ಚಿ
ಜಾಗೃತಗೊಳಿಸುವೆನೆಂಬ ನಂಬಿಕೆಯು ಬೇಡ

ಹೆಸರಿಗೆ ಮಾತ್ರ ದಿನವೆಂದುಕೊಂಡು
ಆ ಕ್ಷಣಕ್ಕಷ್ಟೇ ಮುಗಿಯದಿರಲಿ ಹಬ್ಬವು
ಕೇವಲ ಜಾಲತಾಣಗಳ ಮಿತಿಯಲಿರದೆ
ಬದುಕಿನ ದಿನಚರಿಯಾಗಲಿ ಬರಿ ಮಾತಾಗದೆ

ತಿಳಿದಿಕೊ ತರುವಿರದ ಇಳೆಯು
ಉಗುಳುವ ಬೆಂಕಿ ಮಳೆಯು
ಕರಡಿ ನೀರಾದ ಮಣ್ಣು ಮರಳಾಗಿ
ಪ್ರಳಯದಲೆಗಳ ಎರಗಿಸುವವು ಜೋರಾಗಿ

ನೆರಳಿಗಾಗಿ ತುಸು ಉಸಿರಿಗಾಗಿ
ಕಡಿಯದಿರು ಹಸಿರು ಮರವ
ನೀರಡಿಕೆಗಾಗಿ ಹನಿ ನೀರಿಗಾಗಿ
ಕೊಲ್ಲದಿರು ಜೀವ ಜಲವ

ಮರೆತರೆ ಕ್ರಮಬದ್ಧ ಕಾರ್ಯವನು
ಅನುಭವಿಸುವೆ ಕರುಣೆಯಿರದ ಕರ್ಮವನು
ಉಳಿಯಲು ನೆಡು ಸಸ್ಯದ ಬೇರನ್ನು
ಬದುಕಲು ದುಗುಡ ರಹಿತ ಬಾಳನ್ನು

ಬೆಳೆಸೋಣ ಸಸ್ಯರಾಶಿಯನ್ನ
ಮೆರೆಯಿಸೋಣ ಸಸ್ಯಕಾಶಿಯನ್ನ
ಉಳಿಸೋಣ ಒಂದು ಹನಿ ನೀರನ್ನ
ಬದುಕೋಣ ಸಾಮರಸ್ಯದ ಬದುಕನ್ನ 

No comments:

Post a Comment