Sunday, September 3, 2017

ದೀನರ ಮಾತು

ಹಸಿದ ಹೊಟ್ಟೆಗೆ
ಹಾಗಿರಲಿ ಊಟ
ಕುಡಿಯಲು ತೊಟ್ಟು
ನೀರು ಸಿಗದೆ ಹೋದರೂ
ಕಣ್ಣಂಚಲಿ ಹರಿಯುತಿವೆ
ಗಂಗೆ ತುಂಗೆಯ ತೊರೆಗಳು
ತಡೆಯಲು ಬಾರರು
ಕರುಣೆಯ ಬರವಿರುವ ಜನರು

ಹೊತ್ತಿಗಾದರೂ
ಕೈ ತುತ್ತು ಸಿಕ್ಕರೆ
ಬದುಕಲದುವೆ ಮೃಷ್ಟಾನ್ನವು
ನೀಡರಾರು ತಲೆಬಾಗಿ ಬೇಡಿದರೂ
ದಯೆಯೇ ಇಲ್ಲದ ಧನಿಕರು
ಧರ್ಮದ ಮೂಲ ಮರೆತ ಮತಾಂಧರು

ಆಸೆಗಾದರೂ
ಅರಮನೆಯ ಕನಸ ಕಾಣಲು
ನೈತಿಕತೆ ಪ್ರಶ್ನೆಯ ಉಗಮವು
ಮತದ ಭೇಟೆಗೆ ದಾಳಿಯಿಡುವ
ರಾಜಕಾರಣಿಗಳ ಕರಿ ನೆರಳಲಿ
ಸ್ವಾವಲಂಭಿಯಾಗಿ ಬಾಳ ನಡೆಸಲಾಗದು

ಆತ್ಮತೃಪ್ತಿಗಾದರೂ
ಜಾತಿ ಮತಗಳ ಒಡೆಯದೆ
ಪ್ರಜೆಗೆ ಮಾಡಲಿ ಚೂರು ಒಳಿತನು
ದೇಶ ಹೊಂದುವುದು ಅಭಿವೃದ್ಧಿಯ
ಕೊಂಚ ನಿರಾಳತೆಯ ಭಾವವ ಹೊಂದಲು
ಕೆಡುಕಾಗದು ತಿಂದರೂ ದೀನರ ದುಡ್ಡನು

No comments:

Post a Comment