Saturday, February 22, 2014

ಮರಳಿ ಉದಯಿಸು

ಸಂಜೆಯಾಗುತಿರಲು
ನಡೆಯುತ ತೀರದಿ
ಮುಳುಗುವ ರವಿಯನು
ನೋಡಿ ರಮಿಸುತಿರಲು
ವಿರಹವೆ ಕಾಡುವ
ವಿಹಾರವೆ ವಿಸ್ಮಯ

ಸಾಗರದ ತುದಿಯಲಿ
ಬಾನು ಕೂಡಿದೆ
ಬೆಳಗುವ ಭಾನು
ಕಂತಲು ಕಡಲಲಿ
ಕೆಂಪಾದ ಉಂಡೆ
ಕಾಣದು ಇರುಳಲಿ

ತೇಜನಂತೆ ಪ್ರಜ್ವಲಿಸಿದ
ಜೀವವು ಮರೆಯಾಗುವುದು
ಮರುದಿನ ಉದಯಿಸಿ
ಮರುಜನ್ಮವ ದೃಢೀಕರಿಸುವುದು
ಮರಳಿ ಜನಿಸಲೆ ಬೇಕು
ಜೀವನದ ಸಂಕೋಲೆಯಲಿ

1 comment:

  1. ಭಾನುವಿನ ವಿಸ್ಮಯವೇ ಜಗದುಳಿವಿನ ನಿಜ ಆಹಾರ!

    ReplyDelete