Wednesday, July 31, 2013

|| ತಂತುರು ಮಳೆ ||

ಕರಿ ಮೋಡ ಕವಿದಾಗ
ಮರೆಯಾದ ಭಾಸ್ಕರನು
ಬೆಳಗಲು ತಡವಡಿಸುವ
ಆ ಚಂದ್ರ ಜೊತೆಯಾದರು ||

ನೀ ನನ್ನ ಸೇರಿದರೆ
ಸರಸದ ಜೀವನ
ನನ್ನಿಂದ ದೂರಾದರೆ
ವಿರಸದ ಕವನ ||

ಲಯವಿರದ ರಾಗಕ್ಕೆ
ಶೃತಿಯಿರದ ತಾಳವು
ಭಾವವಿರದ ಪದಗಳಿಗೆ
ಮನಸಿಚ್ಛೆಯ ಹೆಜ್ಜೆಯು ||

ಈ ತಂಪು ವೇಳೆಯಲಿ
ಆ ಸಂಪು ಇಭ್ಹನಿಯು
ವಿರಹವು ಕಾಡಿರಲು
ಒಂಟಿಯಾಗಿಹೆ ತಂತುರು ಮಳೆಯಲಿ ||

6 comments:

  1. Replies
    1. ಲಯವಿರುವ ರಾಗಕ್ಕೆ
      ಶೃತಿಯಿರುವತಾಳವು
      ಭಾವವಿರುವ ಪದಗಳಿಗೆ
      ಮನಸಿಚ್ಛೆಯ ಹೆಜ್ಜೆಯು ||

      ಹೀಗೆ ನಿಮ್ಮ ಬದುಕು ಹಸನಾಗಲಿ ವೀಣಾ ಅವರೆ. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.

      Delete
  2. ತುಂಬಾ ಒಳ್ಳೆಯ ಕವನ ಗೆಳೆಯ. ಸಂಸಾರದಲ್ಲಾದರೂ ಸ್ನೇಹದಲ್ಲಾದರೂ ಸಮರಸವೇ ಜೀವನ.

    ಇಲ್ಲಿ ತಮಾಷೆ ನೋಡಿದೀರಾ? ಮೊದಲ ಕಾಮೆಂಟು ಬರೆದ ವೀಣಮ್ಮ ಇತ್ತೀಚೆಗೆ ಮದುವೆಯಾದವರು. ಅವರ ಬದುಕು:
    ಲಯವಿರುವ ರಾಗಕ್ಕೆ
    ಶೃತಿಯಿರುವತಾಳವು
    ಭಾವವಿರುವ ಪದಗಳಿಗೆ
    ಮನಸಿಚ್ಛೆಯ ಹೆಜ್ಜೆಯು ||
    ಆಗಲಿ ಎಂದೇ ಹಾರೈಸಿ.

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು Badari Sir...

      Delete
  3. very nice... kaviteya bhava jeevantha.

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

      Delete