Saturday, July 27, 2013

|| ಮೂರ್ಖರ ಜೊತೆಗಿನ ಮಾತು ||

ದನವಿರದ ಕೊಟ್ಟಿಗೆಯಲಿ
ಸೊಪ್ಪು ಹಾಸಿದರೇನು
ಸಗಣಿಯಿಲ್ಲದೆ ಗೊಬ್ಬರವಾಗದು
ನೊಪ್ಪು ಒಣಗಿದ ದೆರಕಾಗುವುದು ||

ಬರಡಾದ ಭಾವಿಯಲಿ
ಕೊಡವ ಇಳಿಸಿದರೇನು
ಕುಡಿಯಲು ನೀರು ದೊರೆಯದು
ಗಂಟಲಿನ ದಾಹ ಇಂಗದು ||

ಗಂಧಗೊತ್ತಿರದ ಕತ್ತೆಯೆದುರು
ಕಿನ್ನರಿಯ ಬಾರಿಸಿದರೇನು
ತಿಳಿಯದು ಬುದ್ಧಿವಾದಗಳು
ಸಮಯದ ವ್ಯರ್ಥ ಶ್ರಮಗಳು ||

ಭಾವನೆಗೆ ಬೆಲೆಯಿರದ ಕ್ಷಣಗಳು
ಮೋಹದಲಿ ಮುಳುಗಿದ ಮೌನಗಳು
ಸಂಸ್ಕಾರ ಸಿಗದಿರುವ ಸಲಹೆಗಳು
ಮೂರ್ಖರ ಜೊತೆಗಿನ ಮಾತುಗಳು ||

1 comment:

  1. ಸಮಯದ ವ್ಯರ್ಥ ಶ್ರಮಗಳನ್ನು ಸಾದೃಶ್ಯವಾಗಿ ವಿವರಿಸಿದ್ದೀರಾ. ಅತ್ಯಂತ ಮಾರ್ಮಿಕ ಕವನ.

    ReplyDelete