Thursday, June 7, 2012

|| ಕತ್ತೆಗಂತ ಕೀಳು ||

ಮರುಭೂಮಿಲಿಂದು
ಹನಿಯೊಂದು ಮೂಡಿ
ಮೂರ್ಖಶಿಖಾಮಣಿಯು
ತಾನು ಸುರಿದು
ಕೆಂಪಾದ ಮರಳ ನೋಡಿ
ಒಣಗಿದ ಹಸಿರೆಂದು ತಿಳಿದು
ಬದುಕಿಸಲು ಮೇಲಿಂದ ಬಂತು ||

ಬಾದಾಮಿಹಲ್ವ ಹಿಡಿದು
ಚಂದ್ರನ ಚೂರೆಂದು ತಿಳಿದು
ಮರುಳನಾಗಿ ಮೋಹಗೊಂಡೆ
ಹಗ್ಗವನು ಹಿಡಿದು
ಹೂವೆಂದು ತಿಳಿದು
ಕುರುಡನಂತೆ ನಡೆದೆ ||

ಪರಿಮಳದಿಂದ ಕಸ್ತೂರಿಯೆಂದುಕೊಂಡೆ
ಕೈಸುಡುವಾಗ ಅರಿತೆ
ಕರಿದಾದ ಇಂಗಾಳವೆಂದು
ಕತ್ತೆಗಿಂತ ಕೀಳಾದೆ ಅರಿಯದೆ
ಕಸ್ತೂರಿ ಪರಿಮಳ ||

No comments:

Post a Comment