|
ಇಂಪಾದ ರಾಗದಲ್ಲಿ
|
|
ನನ ಮದುವೆಯ ಕರೆಯೋಲೆ
|
|
ನೀ ನೀಡು ಓ
ಕೋಗಿಲೆ
|
|
ಗರಿ ಬಿಚ್ಚಿ ನಾಟ್ಯವಾಡಿ
|
|
ಆಕರ್ಷಿಸಿ ಸ್ವಾಗತವ
|
|
ನೀ ಕೋರು ಓ
ನವಿಲೆ
|
|
ನಿಮ್ಮೊಂದಿಗೆ ನಾ ಕಳೆದ
|
|
ನೆನಪನ್ನು ಮೆಲಕುತ
|
|
ಇನಿಯನೂರಿಗೆ ನನ್ನ
|
|
ಕಳುಹಿಸಿಕೊಡ ಬನ್ನಿರೆ
|
|
ನಾ ಜೊತೆಯಾಗಿ
|
|
ಹೊರದುವ ಮುನ್ನ
|
|
ಬಳಿಬಂದು ಹರಸುತ
|
|
ಹೋಗಿ ಬಾ ಎಂದು
|
|
ಬಿಳ್ಕೊಡುವಿರಲ್ಲವೆ ||
|
|
ಈ ಹರಿವ ನೀರಿನಲಿ
|
|
ಮಿಂದು ಪುಳಕಿತನಾಗಲು
|
|
ತಾಯಿ ಶರಾವತಿಯ
|
|
ಕೃಪೆಯು ಇಹುದಲ್ಲವೆ
|
|
ವಿಶಾಲವಾದ ಗದ್ದೆಯಲಿ
|
|
ಬೆಳೆದಿರುವ ತೆನೆಯನ್ನು
|
|
ಕಿತ್ತು ತಿಂದು
|
|
ಬಲವಾಗಿ ಬೆಳೆದಿರುವುದು
|
|
ನಿಜವಲ್ಲವೆ ||
|
|
ಆ ಗುಡ್ಡ ಬೆಟ್ಟದಲಿ
|
|
ತುಂಬಿರುವ ಹಸಿರಿನಲಿ
|
|
ಅಡಗಿರುವ ನನ್ನ ಉಸಿರನ್ನು
|
|
ಧಾರೆಯೆರೆಯಿರಿ
|
|
ಹುಟ್ಟಿಂದ ಜೊತೆಯಿರುವ
|
|
ನಿಮ್ಮನ್ನು ನಾ
|
|
ತೊರೆದು ಹೊರಟಿರುವೆ
|
|
ಹರಸಿರಿ ನಮ್ಮನು
|
|
ಬಯಸಿರಿ ನಮ್ಮ
|
|
ಏಳಿಗೆಯನು ||
|
ರವಿ ಕಾಣದ ಊರಲ್ಲಿ ಕವಿ ಕಲ್ಪಿಸದ ರೀತಿಯಲಿ ನನ್ನೊಲುಮೆಯ ಜೊತೆಯಲ್ಲಿ ಬದುಕುವ ಆಸೆಯು ಮನದಲ್ಲಿ
Friday, June 13, 2014
|| ತೊರೆದು ಹೊರಟಿರುವೆ ||
Thursday, June 5, 2014
|| ಭೂತ ಮರೆ ಸಿಹಿ ನೆನೆ ||
ನನ್ನೆದೆಯ ಅರಮನೆಯ
ಮುಂಬಾಗಿಲ ಕಾಯುತಿರುವ
ಕಾವಲಿಗ ನಾನು
ಒದರೊಳಗೆ ಕೂತಿರುವ
ಸಿಂಹಾಸನವ ಏರಿರುವ
ಮನದನ್ನೆ ಮನ್ನಿಸು
ನನ ತಪ್ಪನು
ಈ ಜೀವಕೆ ಉಸಿರಾಗು
ಬದುಕನ್ನು ನೀ ನೀಡು
ನನ್ನ ಜೀವದ ಸರ್ವಸ್ವವು
ನೀನಲ್ಲವೆ...||
ಬೈದಿರುವ ಮುಂಗೋಪಿ
ಎದುರಿನಲಿ ನಿಂತಿರುವೆ
ಜಗಳಾಟಕೆ ಕೊನೆಯೆಂದು
ಕ್ಷಮೆಯಲ್ಲವೆ
ಮುನಿಸನು ಮರೆತಿರುವೆ
ಮಳೆಯಲ್ಲಿ ನೆನೆದಿರುವೆ
ಈ ಪ್ರಮಾದಕೆ ಪರಿಹಾರ
ಉಳಿದಿಲ್ಲವೆ...||
ಆ ಕಡಲ ತೆರೆಯಲ್ಲು
ದಡ ಸೇರುವ ಕಸದಲ್ಲು
ನನ ಪ್ರೀತಿಯ ಕುಟುಕು
ನಿನಗಲ್ಲವೆ
ಕೆಟ್ಟಭೂತ ಮರೆಯುವುದು
ನೆಡೆದ ಸಿಹಿಯನ್ನು ನೆನೆಯುವುದು
ಐಕ್ಯತೆಯೆ ನಮ್ಮ ಬಾಳಿಗೆ
ನೆರವಾಗೊ
ವರವಲ್ಲವೆ...||Saturday, May 31, 2014
|| ಓ ಬೆಳಕೆ ||
ಕರುಣಾಳು ಶಿರವೆರಗಿ
ನಾ ಬೇಡುವೆ
ನೀ ನೀಡು ಕಿರಿದಾದ
ತಿಳಿ ಬೆಳಕನು
ನೀ ಕರುಣಿಸು ಮಿತಿಯಿರುವ
ಕ್ಷೇತ್ರವನ್ನು
ನೀ ದಯಪಾಲಿಸು ಮತ್ತರಳಲು
ಅವಕಾಶವನ್ನು ||
ಸೆರಗೊಡ್ಡಿ ಬೇಡುವೆನು
ಓ ನಂಬಿಕೆ
ಅಳಿಸು ಬಾಲ ಬುದ್ಧಿಯ
ತೋರಿಕೆ
ಉಳಿಸು ಬೆಳವಣಿಗೆಯ
ದೃಢತೆ
ನನ್ನನೇರಿಸು ಎಲ್ಲರಂತೆ
ಸಾಮಾನ್ಯ ಸ್ಥಳಕೆ ||
ನೀನು ಕಿಂಚಿತ್ತಾದರು
ಕೃಪೆದೋರು
ಅಲೆಮಾರಿ ಅಲೆದಾಟದ
ಬದುಕಿಗೆ
ಹೊಡೆದೋಡಿಸು ಮುಸುಕಿರುವ
ಮಬ್ಬನು
ನನ್ನ ಕೈ ಪಿಡಿದು ದಡ
ಸೇರಿಸು ||
ಗೊತ್ತು ಗುರಿಯಿಲ್ಲದ
ಪಯಣದಲಿ
ಮುಚ್ಚಿಡಲು ಗೌಪ್ಯತೆಯು
ಉಳಿದಿಲ್ಲ
ಬಚ್ಚಿಡಲು ಹೊನ್ನನು
ಗಳಿಸಿಲ್ಲ
ಮನವು ಮಣ್ಣು ಮೋಹವ
ಬಯಸದಿರಲು ||
ಕೃಪೆದೋರಿ ನೀ
ಕರುಣಿಸು
ನನ್ನ ಕೈ ಪಿಡಿದು
ನೀ ನಡೆಸು
ಕರುಣೆಯಲಿ ಕಣ್ಣೀರು
ಆರುವುದು
ನಿರ್ದೇಶಿಸು ಓ ಬೆಳಕೆ
ಮುನ್ನಡೆಯಲು ||Saturday, May 24, 2014
|| ಮನ್ನಿಸು ||
ಮುನಿಸೊಂದು ಬಂತು ಎಂದು
ನಿನೀಗ ಗುಡುಗುವುದು ಏಕೆ?
ನಿನ ಪ್ರೀತಿ ಮಾತಿಂದ
ಪಯಣಕ್ಕೆ ಸೊಬಗು ಬಂತೀಗ
ನನ್ನ ಜೀವ ನೀನು ತಾನೆ
ಬಿಡು ಕೋಪ ಸ್ಪೂರ್ತಿ ನೀನೆ ||
ಕಣ್ಣಲ್ಲಿ
ತುಂಬಿದ ನೀರಲ್ಲಿ
ಕೈತೊಳೆಯುವ ಕಂದ ನಾನು
ನಿನ್ನ ಮಗುವಂತೆ ಲಾಲಿಸು
ಎದೆಯಲ್ಲಿ
ಮನಸಿನ ಮನೆಯಲ್ಲಿ
ಆಶ್ರಯವ ನೀ ನೀಡು ನನಗೆ
ನಿರ್ಗತಿಕನೆಂದು ಪೋಷಿಸು ||
ಮೊಗದಲ್ಲಿ
ಭಾವನೆಯ ತೇರಲ್ಲಿ
ಕೆಳಗಿಳಿಸಿ ಕ್ರೋಧದಾಸನವ ನೀ ತೋಕು
ಒಲವಿನಲಿ ಮನ್ನಿಸು ನೀ ಸಾಕು
ಮೊಗದಲ್ಲಿ
ಸೆಳೆಯುವ ಪರಿಯಲ್ಲಿ
ಈ ಎದೆಗೆ ಕನ್ನವ ನೀ ಹಾಕು
ಹುಸಿಮುನಿಸ ನೀ ತೊರೆಯಬೇಕು ||
ನಿನೀಗ ಗುಡುಗುವುದು ಏಕೆ?
ನಿನ ಪ್ರೀತಿ ಮಾತಿಂದ
ಪಯಣಕ್ಕೆ ಸೊಬಗು ಬಂತೀಗ
ನನ್ನ ಜೀವ ನೀನು ತಾನೆ
ಬಿಡು ಕೋಪ ಸ್ಪೂರ್ತಿ ನೀನೆ ||
ಕಣ್ಣಲ್ಲಿ
ತುಂಬಿದ ನೀರಲ್ಲಿ
ಕೈತೊಳೆಯುವ ಕಂದ ನಾನು
ನಿನ್ನ ಮಗುವಂತೆ ಲಾಲಿಸು
ಎದೆಯಲ್ಲಿ
ಮನಸಿನ ಮನೆಯಲ್ಲಿ
ಆಶ್ರಯವ ನೀ ನೀಡು ನನಗೆ
ನಿರ್ಗತಿಕನೆಂದು ಪೋಷಿಸು ||
ಮೊಗದಲ್ಲಿ
ಭಾವನೆಯ ತೇರಲ್ಲಿ
ಕೆಳಗಿಳಿಸಿ ಕ್ರೋಧದಾಸನವ ನೀ ತೋಕು
ಒಲವಿನಲಿ ಮನ್ನಿಸು ನೀ ಸಾಕು
ಮೊಗದಲ್ಲಿ
ಸೆಳೆಯುವ ಪರಿಯಲ್ಲಿ
ಈ ಎದೆಗೆ ಕನ್ನವ ನೀ ಹಾಕು
ಹುಸಿಮುನಿಸ ನೀ ತೊರೆಯಬೇಕು ||
Tuesday, May 20, 2014
|| ಕ್ಷಮಾರ್ಥಿ ||
ಪ್ರೀತಿ ಮಾಡಲು ಬರುವುದಿಲ್ಲ
ನನಗೆ
ನೇರ ಮಾತಿನಲಿ ಹೇಳುವುನೆಲ್ಲ
ಕೊನೆಗೆ
ಜನ ಯಾಕೆ ನಂಬ್ತಾರೆ?
ಮುಖಬಿಡ್ಯ ಮಾಡ್ತಾರೆ?
ತಪ್ಪಾದ್ರೆ ತೆಗಳುತಾರೆ
ಸರ್ಯಾದ್ರೆ ಹೊಗಳುತಾರೆ ||
ಒಲವ ಮಾತಿಗೆ ನಂಬಿ
ಕೆಡುವ
ಖದೀಮ ನಾನು
ಎದ್ರಸಿಟ್ಟಲಿ ರೇಗಾಡಿ ಕೆಲವು
ಸ್ನೇಹ
ಕಳೆದುಕೊಂಡವನು
ಮೋಹದ ಮಾತನಾಡಲು
ದೂರಾದ ಗೆಳೆತನವು
ಸ್ವಾರ್ಥಿಯಾಗಿ ಸ್ವಾವಲಂಬಿಯಾಯಿತು
ಜೀವನವು ||
ಊರುರ ಸುತ್ತಿರಲು ಉಪಯದಿ
ಚುರು
ಉಪಕಾರ ಮಾಡಿರಲು
ಸಂಘಟನೆ ಮಾಡುತ ಸಮಾಜದ
ಸಂಗದಲಿ ಬದುಕಿರಲು
ಮಾಡದ ಕೆಲಸಕೆ ಹೇಳಿಸಿಕೊಳ್ಳುವುದು
ಸಜೆಯಿರದ ಶಿಕ್ಷೆಯು ||
ಮುಂಗೋಪದ ರಾಯಭಾರಿಯು
ಕಿಸಲ್ ಮಾತಿನ ಹಲುಬಿಗ
ಕ್ಷಣ ಮಾತ್ರದ ಸಿಟ್ಟಿಗೆ
ಕೊರಗುವ ಮೌನಿ
ಸೌಜನ್ಯದಲಿ ಬೆರೆತು ಹೋರಾಡುವ
ಕ್ಷಮಾರ್ಥಿ ವಿನಯಿ ||Monday, May 19, 2014
|| ನೆನಪಿನ ವಿಧಗಳು ||
ಸಪೂರಿ ನುಗ್ಗಿ ಚೌಳಿನಲಿ
ಹೊಡೆತ ತಿಂದ
ಆ ದಿನಗಳಲಿ ಹೊಡೆತ
ಕೊಟ್ಟ ಮಾಷ್ಟ್ರು
ಮರೆಯಾಗಿಲ್ಲ ಮನಸಿನ ನೆನಪಿನನಂಗಳದಲ್ಲಿ
ಆಡಿದ ಕಂಬದಾಟದ ಹುರುಪಿನ
ನೆನಪು ||
ಒಂಟಿ ಕಾಲಲಿ ಕುಂಟ್ಲೀಪಿಯಾಡುತ
ಕದ್ದು ಮುಚ್ಚಿ ಕಾಲು
ಬದಲಿಸಿದಾಗ
ತುತಿಯೆಂದು ತಲೆ ಮುಟ್ಟಿ
ಕುಳಿತಾಗ
ಜಿರಿ ಹಾಕಿದಾಗ ಮಾಡಿದ
ಜಗಳದ ನೆನಪು ||
ಉಪಾಧ್ಯಾಯರ ಚರ್ಚೆ ನೆಡೆಯುವಾಗ
ತರಗತಿಯಲಿ ಗಲಾಟೆ ಜೋರಾದಾಗ
ಬೇಕಾಬಿಟ್ಟಿ ತಿಂದ ಹೊಡೆತದ
ನೋವು
ಬೆನ್ನು ಒಡೆದು ರಕ್ತ
ಬಂದ ಕಹಿ ನೆನಪು
||
ಬರದಿದ್ದಾಗ ತಲೆಕೆಟ್ಟು ಕೂತಾಗ
ಪರೀಕ್ಷೆಯಲ್ಲೇನು ಬರೆಯಬೇಕೆಂಬ ಯೋಚನೆ
ಹೊಟ್ಟೆ ಬಟ್ಟೆ ಮೇಲೆ
ಬರೆದು
ಮಾಡಿದ ನಕಲುಗಳ ನಾಚಿಕೆಯ
ನೆನಪು ||
ನಾನಾ ಬಗೆಯ ಹಣ್ಣುಗಳನು
ಕೊಯ್ಯುತ
ಖುಷಿಯಲಿ ಕದ್ದು ತಿಂದು
ತೇಗುವ ಕ್ಷಣಕೆ
ತವರಿಕೊಂಡು ಬಂದ ತೋಟದೊಡೆಯನ
ಕಂಡು
ಕಾಲುಕೀಳುವಾಗ ಕಮ್ಚಡಿಯಾಗಿ ಬಿದ್ದು
ಕದ್ದಿಲ್ಲ ತಿಂದಿಲ್ಲವೆಂದು ಓಡಿದ
ಮರ್ಯಾದಿ ನೆನಪು ||Wednesday, April 30, 2014
|| ಪ್ರೀತಿ ಬದುಕು ||
ನೀರಿನಲಿ ಈಜುವೆನು
ಗಾಳಿಯಲಿ ತೇಲುವೆನು
ಮುನಿಸಿನಲಿ ಮುದುಡುವೆನು
ಸೊಗಸಿನಲಿ ಸಿಹಿಯಾಗುವೆನು
ಮನದ ಭಾವ ಬೆರೆತಾಗ
ಕಿಡಿಯು ಕಿಚ್ಚಾಗಿ ಉರಿದಾಗ
ಮಾತು ಮುದುಡಿ ಮೌನ ||
ನೈಜ ಎಂಬ ಸತ್ಯವನು ಮರೆಯೊದಲ್ಲ
ದಾರದಲಿ ಸಾಯೋದಲ್ಲ
ಕನಸುಗಳ ತಿವುಡೋದಲ್ಲ
ಜಗಳವನು ಮಾಡೋದಲ್ಲ
ಕಣ್ಣೀರ ಹಾಕೋದಲ್ಲ
ಸಪ್ಪೆಯಾಗಿ ಸವೆಯೋದಲ್ಲ
ಮನಸನರಿಯೇ ಬದುಕು ||
ಕಿರುಚಿ ಕೂಗಿ ಮನಸನು ಮುರಿಯೋದೇಕೆ?
ಒಂಟಿಯಾಗಿ ಬಾಳೋದೇಕೆ?
ನಂಬಿಕೆಯ ಗರಿಯೋದೇಕೆ?
ಮೋಸವನು ಮಾಡೋದೇಕೆ?
ಅರ್ಥವಾದ ಆತ್ಮ ಸಾಕೆ?
ಬಲವಾದ ಭರವಸೆ ಬೇಕೆ?
ಪ್ರೀತಿ ಹರಿಯೇ ಬದುಕು ||
ಗಾಳಿಯಲಿ ತೇಲುವೆನು
ಮುನಿಸಿನಲಿ ಮುದುಡುವೆನು
ಸೊಗಸಿನಲಿ ಸಿಹಿಯಾಗುವೆನು
ಮನದ ಭಾವ ಬೆರೆತಾಗ
ಕಿಡಿಯು ಕಿಚ್ಚಾಗಿ ಉರಿದಾಗ
ಮಾತು ಮುದುಡಿ ಮೌನ ||
ನೈಜ ಎಂಬ ಸತ್ಯವನು ಮರೆಯೊದಲ್ಲ
ದಾರದಲಿ ಸಾಯೋದಲ್ಲ
ಕನಸುಗಳ ತಿವುಡೋದಲ್ಲ
ಜಗಳವನು ಮಾಡೋದಲ್ಲ
ಕಣ್ಣೀರ ಹಾಕೋದಲ್ಲ
ಸಪ್ಪೆಯಾಗಿ ಸವೆಯೋದಲ್ಲ
ಮನಸನರಿಯೇ ಬದುಕು ||
ಕಿರುಚಿ ಕೂಗಿ ಮನಸನು ಮುರಿಯೋದೇಕೆ?
ಒಂಟಿಯಾಗಿ ಬಾಳೋದೇಕೆ?
ನಂಬಿಕೆಯ ಗರಿಯೋದೇಕೆ?
ಮೋಸವನು ಮಾಡೋದೇಕೆ?
ಅರ್ಥವಾದ ಆತ್ಮ ಸಾಕೆ?
ಬಲವಾದ ಭರವಸೆ ಬೇಕೆ?
ಪ್ರೀತಿ ಹರಿಯೇ ಬದುಕು ||
Subscribe to:
Posts (Atom)